ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸುಧಾಮೂರ್ತಿ ಚಾಲನೆ

– ಎಂದೆಂದಿಗೂ ಕನ್ನಡವೇ ನನ್ನ ತಾಯಿ ಅಂದ್ರು ಇನ್ಫೋಸಿಸ್ ಮುಖ್ಯಸ್ಥೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ರು.

ಬಳಿಕ ಮಾತನಾಡಿದ ಅವರು, ಪಂಪ ಕವಿ ಹೇಳುವ ಹಾಗೆ ನನಗೆ ಕನ್ನಡ ಎಂದರೆ ತುಂಬಾ ಇಷ್ಟ. ಕನ್ನಡ ನಾಡಲ್ಲಿ ಮತ್ತೆ ಮತ್ತೆ ಹುಟ್ಟಬೇಕು ಅಂತಾ ನನಗೆ ಆಸೆ ಇದೆ. ಅವಿರೋಧವಾಗಿ ನಾನು ದಸರಾ ಉದ್ಘಾಟಕಿಯಾಗಿ ಆಯ್ಕೆ ಆಗಿದ್ದು ನನಗೆ ಬಹಳ ಸಂತೋಷ ತಂದಿದೆ. ಸರ್ಕಾರ ಮಾಡುವ ಕೆಲಸಕ್ಕೆ ನಮ್ಮಂತಹ ಸಂಸ್ಥೆಗಳು ನೆರವಾಗಬೇಕು ಅಂದ್ರು.

ಕೊಡಗಿನ ಜನಕ್ಕೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿ ಕೊಡುತ್ತೇವೆ. ಇದು ದಾನವಲ್ಲ, ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ನೀಡುತ್ತಿದ್ದೇವೆ ಅಷ್ಟೇ. ಮೈಸೂರಿನ ಹೆಬ್ಬಾಳ ಕೆರೆ ಅಭಿವೃದ್ದಿಗೆ ನಮ್ಮ ಫೌಂಡೇಷನ್ ಬದ್ಧವಾಗಿದೆ. ನಾವು ನಿಂತ ಜಾಗವೇ ನಮ್ಮ ನೆಲೆ. ಹೀಗಾಗಿ ನಾವು ಎಲ್ಲೆ ಇದ್ದರೂ ಅವರು ಪಕ್ಕದ ಮನೆ ಆಂಟಿ ಅಷ್ಟೆ ನಮ್ಮ ತಾಯಿ ಆಗೋಲ್ಲ. ಎಂದೆಂದಿಗೂ ಕನ್ನಡವೇ ನನ್ನ ತಾಯಿ ಅಂತ ಅವರು ತಿಳಿಸಿದ್ರು.

ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ರು. ಇನ್ನು, ಅರಮನೆಯಲ್ಲೂ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ಪ್ರಾರಂಭವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/kpEHP6BsOoM

Comments

Leave a Reply

Your email address will not be published. Required fields are marked *