ಇಂದಿರಾ ಕ್ಯಾಂಟೀನ್ ಸುಂದರವಾಗಿಸಿದವರಿಗಿಲ್ಲ ಬಿಲ್ ಭಾಗ್ಯ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್. ಆದ್ರೆ ಈ ಕನಸಿನ ಯೋಜನೆಯನ್ನು ಸುಂದರ ಮಾಡಿದ್ದ ಗುತ್ತಿಗೆದಾರರಿಗೆ ಇದುವರೆಗೂ ಸರ್ಕಾರದಿಂದ ಬಿಲ್ ಪಾವತಿ ಆಗಿಲ್ಲ. ವರ್ಷವಾದರೂ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿ ಮೇಯರ್ ಮತ್ತು ಎಂಜಿನೀಯರ್ ವರ್ಷದ ಹಿಂದೆ ಕೇವಲ ಮೌಖಿಕ ಆದೇಶ ನೀಡಿದ್ದರು. 199 ಇಂದಿರಾ ಕ್ಯಾಂಟೀನ್ ಗಳ ರಕ್ಷಣೆ, ಸೌಂದರ್ಯೀಕರಣಕ್ಕಾಗಿ ಗುತ್ತಿಗೆದಾರರು 35 ಕೋಟಿ ರೂ. ಖರ್ಚು ಮಾಡಿದ್ದಾರೆ. ಅಂದು ಟೆಂಡರ್ ಕರೆಯದೇ ಜಾಬ್ ಕೋಡ್ ನೀಡದೇ ಚುನಾವಣೆಗಾಗಿ ತರಾತುರಿಯಲ್ಲಿ ಕಾಮಗಾರಿಯನ್ನು ನಡೆಸಲಾಗಿತ್ತು.

ಗುತ್ತಿಗೆದಾರರು ಜಾಬ್ ಕೋಡ್ ಹಾಕಿ ಕಾಮಗಾರಿಗೆ ಹಣ ಬಿಡುಗಡೆ ಮಾಡಿ ಅಂತಾ ಮನವಿ ಮಾಡಿಕೊಂಡರೆ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಕೆಲಸಕ್ಕೂ ಮುಂಚಿತವಾಗಿ ನೀಡಬೇಕಿರೋ ಜಾಬ್ ಕೋಡ್ ಕೆಲಸದ ನಂತರ ಸರ್ಕಾರ ನೀಡಿದೆ. ಮೇಯರ್ ಮತ್ತು ಅಧಿಕಾರಿಗಳ ಮಾತನ್ನು ನಂಬಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರು ಬಿಲ್ ಪಾವತಿಗಾಗಿ ಹರಸಾಹಸಪಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *