ಕುಡಿದ ಮತ್ತಿನಲ್ಲಿ ಕಿರಿಕಿರಿ ಮಾಡಿದ್ದಕ್ಕೆ ಭಾರತೀಯ ವ್ಯಕ್ತಿಗೆ ಜೈಲು

ಸಾರ್ವಜನಿಕ ಸ್ಥಳದಲ್ಲಿ ಕುಡಿದು ಕಿರಿಕಿರಿ ಮಾಡಿದ್ದಕ್ಕೆ ಸಿಂಗಾಪುರದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಸೋಮವಾರ 5 ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಮೂರ್ತಿ ನಾಗಪ್ಪನ್(65) ಎಂಬ ವ್ಯಕ್ತಿ ಮಾರ್ಚ್ 28 ರಂದು ಇಟಲ್ ಇಂಡಿಯಾ ಆವರಣದ ಟೆಕ್ಕಾ ಮಾರ್ಕೆಟ್ ಬಳಿ ಪಾನಮತ್ತರಾಗಿದ್ದು, ಮಾಸ್ಕ್ ಕೂಡಾ ಸರಿಯಾಗಿ ಧರಿಸದಿದ್ದರಿಂದ ಬಸ್ ಏರುವಾಗ ಸಾರ್ವಜನಿಕರಿಗೆ ಕಿರಿಕಿರಿ ಮಾಡಿದ್ದಾಗಿ ವರದಿಯಾಗಿತ್ತು.

ಬಸ್ ಚಾಲಕ ಆತನಿಗೆ ಮಾಸ್ಕ್ ಸರಿಯಾಗಿ ಧರಿಸುವಂತೆ ಎಚ್ಚರಿಸಿದಾಗ ಕೋಪಗೊಂಡ ನಾಗಪ್ಪನ್ 33 ವರ್ಷದ ವ್ಯಕ್ತಿಯೊಬ್ಬನ ಮೇಲೆ ಅಸಭ್ಯವಾಗಿ ವರ್ತಿಸಿದ್ದಾನೆ. ಸುಮಾರು 15 ನಿಮಿಷಗಳ ನಂತರ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು. ಇದನ್ನೂ ಓದಿ: 17 ವರ್ಷ ಹಿಂದಿನ ಕೊಲೆಯ ಗುಟ್ಟು- ಕೈದಿ ಮತ್ತೆ ಅರೆಸ್ಟ್

ALCOHOL

ಮತ್ತೊಂದು ಘಟನೆಯಲ್ಲೂ ಆತ ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ಹಾಗೂ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆರೋಪಿಗೆ ಸೋಮವಾರ 5 ತಿಂಗಳು ಜೈಲು ವಾಸ ಹಾಗೂ 1000 ಸಿಂಗಾಪುರ್ ಡಾಲರ್(ಸುಮಾರು 55 ಸಾವಿರ ರೂ.) ದಂಡವನ್ನು ವಿಧಿಸಲಾಗಿದೆ. ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!

Comments

Leave a Reply

Your email address will not be published. Required fields are marked *