ಸಕ್ಕರೆ ನಾಡಿನ ರೈತರಿಗೆ ಸಿಹಿ ಸುದ್ದಿ ನೀಡಿದ ಮನ್ಮುಲ್

ಮಂಡ್ಯ: ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ಸಕ್ಕರೆ ನಾಡಿನ ರೈತರಿಗೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ(ಮನ್ಮುಲ್) ಸಿಹಿ ಸುದ್ದಿ ನೀಡಿದೆ.

ಮನ್ಮುಲ್ ಹೊಸ ಆಡಳಿತ ಮಂಡಳಿಯಿಂದ ಈ ನಿರ್ಧಾರ ತೆಗೆಕೊಳ್ಳಲಾಗಿದೆ. ಪ್ರತಿ ಲೀಟರ್ ಹಾಲಿಗೆ 2.50 ರೂ. ಹೆಚ್ಚಳ ಮಾಡುವ ಮೂಲಕ ಮನ್ಮುಲ್ ರೈತರಿಗೆ ದಸರಾ ಗಿಫ್ಟ್ ನೀಡಿದೆ. ಪ್ರಸ್ತುತ ಒಂದು ಲೀಟರ್ ಹಾಲಿಗೆ 22.50 ರೂ. ನೀಡಲಾಗುತ್ತಿದೆ. ಆದರೆ ಶುಕ್ರವಾರದಿಂದ ಹೊಸ ದರ ಜಾರಿಯಾಗಲಿದ್ದು, ರೈತರಿಗೆ ಪ್ರತಿ ಲೀಟರ್ ಹಾಲಿಗೆ 25 ರೂ. ಹಣ ಕೊಟ್ಟು ಮನ್ಮುಲ್ ಹಾಲು ಖರೀದಿಸಲಿದೆ.

ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡಿರುವ ಬಗ್ಗೆ ಮನ್ಮುಲ್ ನೂತನ ಅಧ್ಯಕ್ಷ ರಾಮಚಂದ್ರು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹಾಲಿನ ದರ ಹೆಚ್ಚಳ ವಿಚಾರ ತಿಳಿದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Comments

Leave a Reply

Your email address will not be published. Required fields are marked *