ಭಾರತ ದಾಳಿಗೆ ಪಾಕ್ ಗಢ ಗಢ – ಮತ್ತೆ ಶಾಂತಿ ಮಂತ್ರ ಪಠಿಸಿದ ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನದ ಉಗ್ರ ಕೇಂದ್ರಗಳ ಮೇಲೆ ಭಾರತ ವಾಯುದಾಳಿ ನಡೆಸಿದ ಒಂದು ದಿನದ ಬಳಿಕ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ಮಾತುಕತೆಗೆ ಆಹ್ವಾನ ನೀಡಿ ಶಾಂತಿಮಂತ್ರವನ್ನು ಪಠಿಸಿದ್ದಾರೆ.

ವಿಶ್ವದಲ್ಲಿ ನಡೆದ ಯುದ್ಧಗಳನ್ನು ಕೂಡ ತಪ್ಪಾಗಿ ಆರ್ಥೈಸಲಾಗಿದೆ. ಯುದ್ಧಗಳು ಪ್ರಾರಂಭವಾದ ಬಳಿಕ ಅವು ಎಲ್ಲಿ ಹೋಗಿ ನಿಲ್ಲುತ್ತದೆ ಎನ್ನುವುದು ತಿಳಿಯುವುದಿಲ್ಲ. ನಿಮ್ಮ ಬಳಿಯೂ ಶಸ್ತ್ರಾಸ್ತ್ರವಿದ್ದು ನಮ್ಮ ಬಳಿಯೂ ಶಸ್ತ್ರಾಸ್ತ್ರವಿದೆ. ಆದರೆ ನಾವು ಈ ಸಂದರ್ಭದಲ್ಲಿ ತಪ್ಪಾಗಿ ಶಸ್ತ್ರಾಸ್ತ್ರವನ್ನು ಬಳಸುವುದು ಸರಿಯೇ ಎಂದು ಪ್ರಶ್ನಿಸುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಒಂದೊಮ್ಮೆ ಯುದ್ಧ ಆರಂಭವಾದರೆ ಅದರ ನಿಯಂತ್ರಣ ನನ್ನ ಕೈಯಲ್ಲೂ ಇರುವುದಿಲ್ಲ, ನರೇಂದ್ರ ಮೋದಿ ಅವರ ಕೈಯಲ್ಲೂ ಇಲ್ಲ. ಉಗ್ರವಾದದ ಬಗ್ಗೆ ಮಾತುಕತೆ ನಡೆಸಲು ನಾವು ಸಿದ್ಧವಿದ್ದೇವೆ. ನಾವು ಕುಳಿತು ಮಾತನಾಡುವ ಅಗತ್ಯವಿದೆ ಎಂದಿದ್ದಾರೆ.

ಪುಲ್ವಾಮಾ ದಾಳಿಯ ಬಳಿಕ ನಾನು ಭಾರತದೊಂದಿಗೆ ಶಾಂತಿ ಮಾತುಕತೆ ಆಹ್ವಾನ ನೀಡಿದ್ದೆ. ನನಗೂ ಯೋಧರ ಕುಟುಂಬಗಳ ನೋವು ಏನಿದು ತಿಳಿಯುತ್ತದೆ. ಈ ಹಿಂದೆ ನಮ್ಮವರನ್ನು ಕಳೆದುಕೊಂಡ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಯೋಧರ ನೋವನ್ನು ಕಂಡಿದ್ದೇನೆ. ಇದರಿಂದಲೇ ನಾನು ಮಾತುಕತೆಗೆ ಆಹ್ವಾನ ನೀಡಿದ್ದೇನೆ ಎಂದರು.

ಇದೇ ವೇಳೆ ಭಾರತ ಎರಡು ಯುದ್ಧ ವಿಮಾನಗಳನ್ನು ಪಾಕ್ ಸೇನೆ ಹೊಡೆದುರುಳಿಸಿದ್ದಾಗಿ ತಿಳಿಸಿದ ಇಮ್ರಾನ್ ಖಾನ್, ನಾವು ಯಾವುದೇ ಕಠಿಣ ನಿರ್ಧಾರ ಕೈಗೊಳ್ಳಲು ಸಿದ್ಧ. ಆದ್ದರಿಂದಲೇ ನಿಮ್ಮ ದಾಳಿಯ ಪ್ರತಿಕ್ರಿಯೆಯಾಗಿ ನಮ್ಮ ಯುದ್ಧ ವಿಮಾನಗಳು ಗಡಿದಾಟಿ ಬಂದಿದೆ ಎಂದು ಸ್ಪಷ್ಟನೆ ನೀಡಿದರು.

ಮೊದಲ ವಿಶ್ವಯುದ್ಧ ಒಂದು ವಾರದಲ್ಲಿ ಪೂರ್ಣಗೊಳ್ಳುತ್ತದೆ ಎನ್ನಲಾಗಿತ್ತು. ಆದರೆ ಅದು 6 ವರ್ಷ ನಡೆಯಿತು. ಭಯೋತ್ಪಾದನೆಯ ಹೆಸರಿನಲ್ಲಿ ನಡೆಯುವ ಯುದ್ಧ 17 ವರ್ಷಗಳ ಕಾಲ ನಡೆಯುತ್ತದೆ ಎಂದು ಅಮೆರಿಕ ಸಹ ನಿರೀಕ್ಷೆ ಮಾಡಲಿಲ್ಲ. ಹೀಗಾಗಿ ಈಗ ಮತ್ತೊಮ್ಮೆ ಮಾತುಕತೆಗೆ ಆಹ್ವಾನ ನೀಡುತ್ತಿದ್ದು, ಕುಳಿತು ಚರ್ಚೆ ಮಾಡೋಣ ಎಂದು ಇಮ್ರಾನ್ ಖಾನ್ ಆಹ್ವಾನ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *