ನಾನು ನಿಮ್ಮ ಮುಂದೆ ಕಸ, ನೀವು ದೊಡ್ಡವರು – ಎಚ್‌ಡಿಕೆ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

ಕೋಲಾರ: ನಾನು ನಿಮ್ಮ ಮುಂದೆ ಕಸ, ನೀವು ದೊಡ್ಡವರು, ಆದ್ರೆ ನೀವು‌ ಮಾತನಾಡಿರುವ ಮಾತೇನು ಎಂದು ಪ್ರಶ್ನಿಸಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ.

ನಿಮ್ಮ ಮುಂದೆ ನಾನು ಮಹಾನಾಯಕ‌ ಆಗಲು ಸಾಧ್ಯವೇ? ನಿಮ್ಮ ಅಣ್ಣ ತಮ್ಮಂದಿರು, ದೇವೇಗೌಡರು‌ ಇರುವಾಗ‌ ನಾನು ಮಹಾನಾಯಕ ಯಾವ ಜನ್ಮಕ್ಕೆ ಆಗಬೇಕು ಎಂದು ಪ್ರಶ್ನಿಸಿ ಟಾಂಗ್‌ ನೀಡಿದರು.

ಶ್ರೀನಿವಾಸಪುರ‌ ತಾಲೂಕಿನ ಗಾಂಡ್ಲಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ರಮೇಶ್ ಕುಮಾರ್, ನಾನು ನಿಮ್ಮ ಮುಂದೆ ಕಸ. ನೀವು ದೊಡ್ಡವರು ಆದ್ರೆ ನೀವು‌ ಮಾತನಾಡಿರುವ ಮಾತೇನು? ಸಾವಿರಾರು‌ ಕೋಟಿ ಲೂಟಿನಾ ಎಂದು ಪ್ರಶ್ನೆ ಮಾಡಿದ ಅವರು ನಿಮ್ಮ ಬಾಯಲ್ಲಿ‌ ಇಂತಹ ಮಾತುಗಳು‌ ಬರಬಾರದು ಕುಮಾರಸ್ವಾಮಿಯವರೇ ಎಂದರು. ಇದನ್ನೂ ಓದಿ: ಮತ್ತೆ ಸರ್ಜಿಕಲ್‌ ಸ್ಟ್ರೈಕ್‌? – ಪಾಕಿಸ್ತಾನಕ್ಕೆ ಅಮಿತ್‌ ಶಾ ಎಚ್ಚರಿಕೆ

ರೈತರ ಪಕ್ಷ ಅಂತೀರಿ. ಕೊಚ್ಚೆ ನೀರು ಅಂತೀರಿ. ಈ‌ ನೀರಿನ ಬಗ್ಗೆ ಜನರನ್ನು ಎತ್ತಿ ಕಟ್ಟುತ್ತೀರಿ. ಮತ್ತೆ ಎತ್ತಿನ ಹೊಳೆ ಯೋಜನೆ‌ ಏನಾಯಿತು ಅಂತಿರಾ. ಇದೆಲ್ಲವನ್ನು ಜನ ನೋಡುತ್ತಿದ್ದಾರೆ. ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸ‌ ಮಾಡುತ್ತಿದ್ದೀರಿ ಎಂದು ಎಂದು ಟಾಂಗ್ ನೀಡಿದರು.

ಕೋಲಾರ ಚಿಕ್ಕಬಳ್ಳಾಪುರ ಜನಬರು ಎಷ್ಟು ‌ದಿನ‌ ಕೊಚ್ಚೆ ನೀರು ಕುಡಿಯುಬೇಕು ಅಂತೀರಿ‌. ನೀವೇ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿ ರಮೇಶ್‌ ಕುಮಾರ್‌ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಉದ್ಯೋಗಿಗಳ ಬೆಸ್ಟ್‌ ಕಂಪನಿ ಔಟ್‌ – ಭಾರತದ ಯಾವ ಕಂಪನಿಗೆ ಎಷ್ಟನೇ ಸ್ಥಾನ?

 

Comments

Leave a Reply

Your email address will not be published. Required fields are marked *