ಆಯುರ್ವೆದಿಕ್ ಸೆಂಟರ್ ಗೆ ಹೋದ್ರೆ ಮಸಾಜ್ ಅಲ್ಲ, ಸೆಕ್ಸ್ ಮಾಡ್ಲೇಬೇಕು!

– ಬಟ್ಟೆ ಬಿಚ್ಚಿಸಿ ಹುಡ್ಗಿ ಪಕ್ಕ ಮಲಗಿಸಿ ಫೋಟೋ ಕ್ಲಿಕ್
– ಮಸಾಜ್‍ಗೆ ಹೋಗಿದ್ದ ಓಲಾ ಚಾಲಕನಿಗೆ ಥಳಿತ

ಬೆಂಗಳೂರು: ನಗರದಲ್ಲಿ ಆಯುರ್ವೆದಿಕ್ ಮಸಾಜ್ ಸೆಂಟರ್ ಹೆಸರಿನಲ್ಲಿ ಅಕ್ರಮ ಮಾಂಸ ದಂಧೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಬಾಣಸವಾಡಿಯಲ್ಲಿ 15 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಯುರ್ವೆದಿಕ್ ಮಸಾಜ್ ಮಾಡಿಸಿಕೊಳ್ಳಲು ಹೋಗಿದ್ದ ಓಲಾ ಕ್ಯಾಬ್ ಚಾಲಕ ಲೈಂಗಿಕ ಕ್ರಿಯೆ ನಡೆಸದೆ ಇದ್ದ ಕಾರಣ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈಗ ಗಾಯಗೊಂಡಿದ್ದ ಕ್ಯಾಬ್ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಕ್ಯಾಬ್ ಚಾಲಕ ನಂದಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?
ನನ್ನ ಮೊಬೈಲ್ ಗೆ 2 ಸಾವಿರ ರೂ.ಗೆ ಆರ್ಯುವೇದಿಕ್ ಬಾಡಿ ಮಸಾಜ್ ಮಾಡಲಾಗುತ್ತದೆ ಎಂದು ಸಂದೇಶ ಬಂದಿತ್ತು. ಅದರಂತೆಯೇ ನಾನು ಮಸಾಜ್ ಪಾರ್ಲರ್ ಗೆ ಹೋಗಿದ್ದೆ. ಅಲ್ಲಿದ್ದವರ ನಡವಳಿಕೆ ಸರಿಯಿರಲಿಲ್ಲ. ಬಳಿಕ ಇದು ಅಕ್ರಮ ವೇಶ್ಯಾವಾಟಿಕೆ ಎಂದು ವಾಪಸ್ ಹೋಗುತ್ತಿದ್ದೆ. ಆದರೆ ಅವರು ನನ್ನ ಮೊಬೈಲ್ ಕಿತ್ತುಕೊಂಡು ಹಣ ಕೊಡುವಂತೆ ಒತ್ತಾಯ ಮಾಡಿದರು. ಬಳಿಕ ಇಬ್ಬರು ಹುಡುಗರು ನನ್ನನ್ನು ಎಳೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿ ಅಪರಿಚಿತ ಹುಡುಗಿಯ ಜೊತೆ ಮಲಗಿಸಿ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಇದನ್ನು ಯಾರಿಗಾದರೂ ಹೇಳಿದರೆ ಮೀಡಿಯಾಗೆ ಕೊಟ್ಟು, ಕೇಸ್ ದಾಖಲಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದರು.

ನಾನು ಅವರಿಂದ ತಪ್ಪಿಸಿಕೊಂಡು ಕಾರಿನಲ್ಲಿ ಹೊರಟೆ. ಆಗ ಅವರು ನನ್ನನ್ನು ಕಾರು ಮತ್ತು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದರು. ಕೊನೆಗೆ ಚಿಂತಾಮಣಿ ರಸ್ತೆ ಶಿವನಾಪುರ ಕ್ರಾಸ್ ಬಳಿ ದಾಳಿ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ನನ್ನ ಮೇಲೆ ಚಾಕು ಮತ್ತು ಮದ್ಯದ ಬಾಟಲ್ ನಿಂದ ಹಲ್ಲೆ ಮಾಡಿದರು. ಜೊತೆಗೆ ನನ್ನ ಬಳಿ ಇದ್ದ ಹಣ, ಚಿನ್ನ ಎಲ್ಲವನ್ನು ಕಿತ್ತುಕೊಂಡು ಗಲಾಟೆ ಮಾಡುತ್ತಿದ್ದರು. ಅಷ್ಟರಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ನೋಡಿ ಪರಾರಿಯಾದರು. ಬಳಿಕ ನಾನು ನನ್ನ ಸ್ನೇಹಿತನಿಗೆ ಮಾಹಿತಿ ತಿಳಿಸಿದ್ದೆ. ಆತನು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದನು. ಇಷ್ಟು ದಿನ ನಾನು ಚಿಕಿತ್ಸೆ ಪಡೆಯುತ್ತಿದ್ದೆ. ಆದ ಕಾರಣ ತಡವಾಗಿ ನಾನು ದೂರು ನೀಡುತ್ತಿದ್ದೇನೆ. ಬಾಣಸವಾಡಿ ನಿವಾಸಿಗಳಾದ ಆಶ್ರಫ್, ಕಾರ್ತಿಕ್, ಜಾನ್, ಸುರೇಶ್ ಹಾಗೂ ಇತರರು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪೊಲೀಸರ ತನಿಖೆ ಮಾಡಿದ್ದು, ಆರೋಪಿಗಳ ಜಾಡುಹಿಡಿದಿದ್ದಾರೆ. ಅಷ್ಟೇ ಅಲ್ಲದೇ ಕ್ಯಾಬ್ ಚಾಲಕ ಆರೋಪಿಗಳ ಹೆಸರು, ಫೋಟೊ,ಅವರ ಹಿನ್ನೆಲೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ನನ್ನ ಮೇಲೆ ಹಲ್ಲೆ ಮಾಡುವಾಗ ಪಿಸ್ತೂಲ್ ಬಿಟ್ಟು ಹೋಗಿದ್ದರು. ಆದರೆ ಅದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸದಂತೆ ಬಾಣಸವಾಡಿ ಇನ್ಸ್ ಪೆಕ್ಟರ್ ಹೇಳಿದ್ದರು. ಈಗ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದರೂ ಪೊಲೀಸರು ಬಂಧಿಸಿಲ್ಲ ಎಂದು ಕ್ಯಾಬ್ ಚಾಲಕ ಆರೋಪ ಮಾಡಿದ್ದಾರೆ.

ಸದ್ಯ ಕ್ಯಾಬ್ ಚಾಲಕ ಮತ್ತೆ ನಂದಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *