ಬ್ರಾಹ್ಮಣ ಕನ್ಯೆಯನ್ನು ಮದುವೆಯಾದ್ರೆ ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ: ದಿವಾಕರ್ ರೆಡ್ಡಿ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಆಗಬೇಕಾದರೆ ಬ್ರಾಹ್ಮಣ ಯುವತಿಯನ್ನು ಮದುವೆ ಆಗಬೇಕು ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕ ಸಿ.ದಿವಾಕರ್ ರೆಡ್ಡಿ ಹೇಳಿದ್ದಾರೆ.

ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮವೊಂದರ ಭಾಷಣದ ವೇಳೆ ಶಾಸಕ ಸಿ ದಿವಾಕರ್ ರೆಡ್ಡಿ ಅವರು ಪ್ರಸ್ತಾಪಿಸಿದ ಮಾತುಗಳು ರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಹುಲ್ ಗಾಂಧಿ ಬ್ರಾಹ್ಮಣ ಕನ್ಯೆಯನ್ನು ವರಿಸಿದರೆ ಪ್ರಧಾನಿ ಆಗೋದು ಪಕ್ಕಾ ಎಂದು 2014 ಲೋಕಸಭಾ ಪೂರ್ವದಲ್ಲಿಯೇ ಸೋನಿಯಾ ಗಾಂಧಿ ಅವರಿಗೆ ದಿವಾಕರ್ ರೆಡ್ಡಿ ಅವರು ಹೇಳಿದ್ದರಂತೆ.

“ರಾಷ್ಟ್ರ ರಾಜಕೀಯದಲ್ಲಿ ಉತ್ತರ ಪ್ರದೇಶ ಬ್ರಾಹ್ಮಣರ ಬೆಂಬಲ ಅಗತ್ಯ. ಏಕೆಂದರೆ ಅಲ್ಲಿ ರಾಜ್ಯವನ್ನು ಆಳುತ್ತಿರುವುದು ಬ್ರಾಹ್ಮಣರೇ. ಹೀಗಾಗಿ ಉತ್ತಮ ಬ್ರಾಹ್ಮಣ ಕನ್ಯೆಯನ್ನು ರಾಹುಲ್ ಅವರಿಗೆ ತನ್ನಿ ಅಂತಾ ಸೋನಿಯಾ ಗಾಂಧಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಸ್ಥಾನ ತಪ್ಪಿತು’ ಎಂದು ಕಾಂಗ್ರೆಸ್ಸಿನಲ್ಲಿ ತಾವು ನೀಡಿದ್ದ ಸಲಹೆಯನ್ನು ಈಗ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *