ಮೋದಿ ಬಂದ್ರೇನು ಡಬ್ಬಿಯಲ್ಲಿ ವೋಟ್ ಬೀಳ್ತಾವಾ? ಮಾಜಿ ಸಚಿವ

ಕೊಪ್ಪಳ: ಮೋದಿ ಬಂದ್ರೇನು ಡಬ್ಬಿಯಲ್ಲಿ ವೋಟ್ ಬೀಳ್ತಾವಾ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೊಪ್ಪಳದಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಶುಕ್ರವಾರ ಗಂಗಾವತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಬರುತ್ತಿದ್ದಾರೆ. ಮೋದಿ ಬಂದ್ರೆ ಎಲ್ಲವೂ ಡಬ್ಬಿಯಲ್ಲಿ ವೋಟ್ ಬಿದ್ದಬಿಡ್ತಾವಾ? ನಾವು ಮೋದಿ ಹೋದ ನಂತರ ಅವರ ಭಾಷಣದ ಬಗ್ಗೆ ಜನರಿಗೆ ಮನವರಿಕೆ ಮಾಡಿ ತಿಳಿಸುತ್ತೇವೆ. ಕಳೆದ ಸಲ ಮೋದಿ ಕೊಪ್ಪಳಕ್ಕೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ. ಎಂದು ಗುಡುಗಿದ್ದಾರೆ.

15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ರು, ಉದ್ಯೋಗ ಕೊಡ್ತೀನಿ ಅಂದ್ರು ಅದು ಎಲ್ಲವೂ ಸುಳ್ಳು ಭರವಸೆಯಾಗಿದೆ. ಶುಕ್ರವಾರ ಮತ್ತೆ ಗಂಗಾವತಿಗೆ ಸುಳ್ಳು ಹೇಳಲು ಬರುತ್ತಿದ್ದಾರೆ. ಆ ವಿಷಯದಲ್ಲಿ ನಾವು ಜನರಿಗೆ ಏನ್ ಮುಟ್ಟಿಸಬೇಕು, ಅದನ್ನು ಮುಟ್ಟಿಸುತ್ತೇವೆ ಎಂದು ತಂಗಡಗಿ ಹೇಳಿದರು.

Comments

Leave a Reply

Your email address will not be published. Required fields are marked *