ದೇವರು ಪ್ರತ್ಯಕ್ಷವಾದ್ರೆ ಸಾಯ್ಸಿ ದೇವಸ್ಥಾನ ಕಟ್ಟುತ್ತಾರೆ- ಬಿಜೆಪಿ ವಿರುದ್ಧ ದ್ವಾರಕನಾಥ್ ಕಿಡಿ

ಚಾಮರಾಜನಗರ: ದೇವರು ಪ್ರತ್ಯಕ್ಷವಾದರೆ ಆತನಿಗೆ ಚೂರಿ ಹಾಕಿ ಸಾಯಿಸಿ, ನಂತರ ದೇವಸ್ಥಾನ ಕಟ್ಟುತ್ತಾರೆ. ರಾಮ, ಕೃಷ್ಣ, ಶಿವ ಬಂದರೇ ಅವರುಗಳಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಮಾತ್ರ ಎಂದು ಹಿರಿಯ ವಕೀಲ ಡಾ. ಸಿ.ಎಸ್.ದ್ವಾರಕನಾಥ್ ಕಿಡಿಕಾರಿದ್ರು.

ಚಾಮರಾಜನಗರದ ಜೆಹೆಚ್ ಪಟೇಲ್ ಸಭಾಂಗಣದಲ್ಲಿ ಬಿವಿಎಸ್ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕೀರ್ಣದಲ್ಲಿ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ನೀವೂ ನಿಮ್ಮ ರಾಮನನ್ನ ರಾಜಕೀಯ ವ್ಯಾಪರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೀರಾ. ನಿಮ್ಮ ರಾಮ ನನ್ನ ರಾಮನಲ್ಲ. ಟ್ರೈಬಲ್ ನ 500 ರಾಮಯಣಗಳಲ್ಲಿ ರಾವಣನೇ ಹೀರೋ. ವಾಲ್ಮೀಕಿ, ಕುವೆಂಪು, ಲೋಹಿಯಾ ಹೇಳುವ ರಾಮ ಬೇರೆ, ನೀವೂ ಹೇಳುವ ರಾಮ ಬೇರೆ. ಹಿಂದುಪರ ಸಂಘಟನೆ ಹಾಗೂ ಬಿಜೆಪಿ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿಗೆ ವ್ಯತ್ಯಾಸವೇ ಇಲ್ಲ. ಇವರ ಜಂಡ ಬೇರೆ ಅಜಂಡ ಒಂದೇ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳನ್ನು ನಾವು ತಿರಸ್ಕರಿಸಬೇಕು ಅಂದ್ರು.

ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆ ಹೇಳಿಕೆ ಕುರಿತು ಮಾತನಾಡಿದ ಅವರು, ಅನಂತಕುಮಾರ್ ಹೆಗ್ಗಡೆ ವಿಕೃತ ಮನುಷ್ಯ. ಜಾತ್ಯಾತೀತ ನನ್ನ ಮಕ್ಕಳಿಗೆ ತಂದೆ-ತಾಯಿ ಇಲ್ಲ ಅಂತಾ ಅವನು ಮಾತನಾಡುತ್ತಾನೆ. ತಾಯಿ-ತಂದೆಗಳನ್ನು ನಿರೂಪಿಸಿಕೊಳ್ಳಬೇಕಾದವರು ನಾವಲ್ಲ. ತಾಯಿ ತಂದೆ ಯಾರು ಅಂತ ತಾಯಿ-ತಂದೆಗಳ ಬಗ್ಗೆ ಅನುಮಾನ ಇರುವ ನೀವೂ ನಿರೂಪಿಸಿಕೊಳ್ಳಿ. ಆತ ಒಬ್ಬ ವಿಷಪೂರಿತ ವ್ಯಕ್ತಿ. ಆತನನ್ನು ಹೆಗ್ಗಣಗಳಿಗೆ ಹೋಲಿಕೆ ಮಾಡಿದ್ದೆ, ಆದರಿಂದ ಹೆಗ್ಗಣಗಳು ಬೇಜಾರು ಮಾಡಿಕೊಂಡಿದ್ದವೂ ಎಂದು ಲಘುವಾಗಿ ಟೀಕೆ ಮಾಡಿದ್ರು.

Comments

Leave a Reply

Your email address will not be published. Required fields are marked *