ಬಿಎಸ್‍ವೈ ಗಂಡಸಾಗಿದ್ರೆ ಇಲ್ಲಿ ಬಂದು ಮಾತಾಡ್ಲಿ: ಮಧು ಬಂಗಾರಪ್ಪ ವಾಗ್ದಾಳಿ

ಧಾರವಾಡ: ಶಿವಮೊಗ್ಗ ಜಿಲ್ಲೆಯಿಂದ ಮೂರು ಜನ ಮುಖ್ಯಮಂತ್ರಿಗಳು ಆಗಿದ್ದಾರೆ. ಅದರಲ್ಲಿ ಅತ್ಯಂತ ಕಚಡಾ ಮುಖ್ಯಮಂತ್ರಿ ಅಂದ್ರೆ ಅದು ಬಿಎಸ್ ಯಡಿಯೂರಪ್ಪ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜೆಡಿಎಸ್ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಮೂಗನ್ನ ಹಿಡಿದು ರೈತರ ಸಾಲ ಮನ್ನಾ ಮಾಡಿಸುವದಾಗಿ ಹೇಳುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಪ್ರಧಾನಿ ಮೋದಿ ಮೂಗನ್ನ ಹಿಡಿದು ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು. ರೈತರ ಸಾಲವನ್ನ ಮನ್ನಾ ಮಾಡದೇ ಇದ್ರೆ ರೈತರು ನಿಮ್ಮ ಮನೆಗೆ ಬರ್ತಾರೆ ಅಂದ್ರು.

ಕಲ್ಲಡ್ಕ ಪ್ರಭಾಕರ ಅವರನ್ನ ಬಂಧಿಸಿದರೆ ಇಡೀ ಮಂಗಳೂರಿಗೆ ಬೆಂಕಿ ಹಾಕ್ತೀನಿ ಅಂತಾರೆ ಬಿಎಸ್‍ವೈ. ಗಂಡಸುತನ ಇದ್ರೆ ಅದೇ ಮಾತನ್ನ ಇಲ್ಲೇ ಬಂದು ಹೇಳಲಿ ಎಂದು ಮಧು ಬಂಗಾರಪ್ಪ ಸವಾಲು ಹಾಕಿದ್ರು. ಯಡಿಯೂರಪ್ಪನವರ ರಕ್ತ ಒಳ್ಳೆ ರಕ್ತ ಅಲ್ಲ. ಅದು ರಾಜ್ಯದ ರೈತರ ವಿರೋಧಿ ರಕ್ತ ಎಂದು ಬಿಎಸ್‍ವೈ ಮೇಲೆ ಕಿಡಿ ಕಾರಿದರು.

Comments

Leave a Reply

Your email address will not be published. Required fields are marked *