ಮೋದಿ ಅವಧಿಯಲ್ಲಿ ಆದಾಯ ಹೆಚ್ಚಾಗಿದೆಯೆಂದು ಹೇಳಿದ್ರೆ ಸನ್ಮಾನ- ಪ್ರಮೋದ್

ಚಿಕ್ಕಮಗಳೂರು: ಕಳೆದ ಐದು ವರ್ಷದ ಅವಧಿಯಲ್ಲಿ ನನ್ನ ಆದಾಯ ಹೆಚ್ಚಾಗಿದೆ ಎಂದು ಯಾರಾದರೂ ಒಬ್ಬರು ಹೇಳಿದ್ರು ಸಾಕು. ನಾನು ಅವರಿಗೆ ಸನ್ಮಾನ ಮಾಡುತ್ತೇನೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರೋಕ್ಷವಾಗಿ ಮೋದಿಗಿಂತ ಮನಮೋಹನ್ ಸಿಂಗ್ ಗ್ರೇಟ್ ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮೋದಿ ಅಧಿಕಾರದ ಅವಧಿಯಲ್ಲಿ ನನ್ನ ಆದಾಯ ಹೆಚ್ಚಾಗಿದೆ. ಹೀಗಂತ ಒಬ್ಬೇ ಒಬ್ಬರು ಬಂದು ನನ್ನ ಬಳಿ ಹೇಳಲಿ. ನಾನು ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಸಭೆಗಳಿಗೆ ಹೋಗಿ ಕೇಳುತ್ತಿದ್ದೇನೆ. ಆದರೆ ಇಲ್ಲಿವರೆಗೂ ಯಾರೊಬ್ಬರು ನನ್ನ ಸನ್ಮಾನ ಸ್ವೀಕರಿಸಲು ಮುಂದೆ ಬಂದಿಲ್ಲ ಎಂದು ಹೇಳಿದ್ರು.

ನೋಟ್ ಬ್ಯಾನ್ ಹಾಗೂ ಜಿಎಸ್‍ಟಿಯಿಂದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ನಾನು ಸಭೆಗಳಿಗೆ ಹೋಗಿ ಕೇಳುತ್ತಿದ್ದೇನೆ. ಮನಮೋಹನ್ ಸಿಂಗ್ ಕಾಲದಲ್ಲಿ ಇದ್ದ ನಿಮ್ಮ ಆರ್ಥಿಕ ಸ್ಥಿತಿಗೂ ಮೋದಿ ಕಾಲದ ನಿಮ್ಮ ಆರ್ಥಿಕ ಸ್ಥಿತಿಗೂ ಏನಾದರೂ ವ್ಯತ್ಯಾಸವಿದ್ಯಾ, ಆರ್ಥಿಕ ಸ್ಥಿತಿ ಹೆಚ್ಚಾಗಿದ್ಯಾ, ಕಡಿಮೆಯಾಗಿದ್ಯಾ ಅಥವಾ ಯಥಾ ಸ್ಥಿತಿ ಇದ್ಯಾ ಎಂದು ಪ್ರಶ್ನಿಸುತ್ತಿದ್ದೇನೆ ಅಂದ್ರು.

ನಾನು ಆ ರೀತಿ ಕೇಳುವಾಗ ಎಲ್ಲಾ ಕಡೆ ಜನರು ಆರ್ಥಿಕವಾಗಿ ನಾವು ಸೋತಿದ್ದೇವೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ, ಯಾರಾದರೂ ನನ್ನ ಆದಾಯ ಹೆಚ್ಚಾಗಿದೆ ಎಂದು ಬಂದರೆ ನಾನು ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *