ಮಾಧ್ಯಮಗಳಲ್ಲಿ ನನ್ನ ಬಗ್ಗೆ ಏನ್ ತೋರಿಸ್ತಾರೆ? ನೋಡಲು ಟಿವಿ ಬೇಕು: ದುನಿಯಾ ವಿಜಯ್

ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಈಗ ಟಿವಿಯವರು ನನ್ನ ಬಗ್ಗೆ ಏನ್ ತೋರಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಟಿವಿ ಬೇಕೆಂದು ಹಠ ಹಿಡಿದಿದ್ದಾರೆ.

ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿದ್ದರು. ಬ್ಯಾರಕ್‍ಗೆ ಹೋಗಲ್ಲ ಎಂದಿದ್ದಕ್ಕೆ ಸೆಲ್ ನೀಡಲಾಯಿತು. ಈಗ ಮನೆಯ ಊಟ, ತಿಂಡಿ ಬೇಕೆಂದು ಕೇಳಿದ್ದಾರೆ. ಅಲ್ಲದೇ ಮಾಧ್ಯಮಗಳು ನನ್ನ ಬಗ್ಗೆ ಏನ್ ತೋರಿಸುತ್ತಿದ್ದಾರೆ ಎಂದು ನೋಡಲು ಟಿವಿ ಬೇಕೆಂದು ಕೇಳಿದ್ದಾರೆ ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ನಾನೇನು ಮಾಡಿದರೂ ಸರಿ, ನಾನೇ ಬಾಸು ನಂದೆ ದುನಿಯಾ ಎನ್ನುತಿದ್ದ ಕರಿಚಿರತೆ ಈಗ ಕಂಬಿ ಹಿಂದೆ ಸೆರೆಯಾಗಿದೆ. ಸಣ್ಣದೊಂದು ಗಲಾಟೆಗೆ ಜಿಮ್ ಟ್ರೈನರ್ ಮಾರುತಿ ಗೌಡನನ್ನು ಕಿಡ್ನಾಪ್ ಮಾಡಿದ್ದಲ್ಲದೇ, ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ದುನಿಯಾ ವಿಜಿ ಜೈಲು ಸೇರಿದ್ದಾರೆ.

ಮಗನಿಗೆ ಸಣ್ಣ ಮಾತನ್ನು ಹೇಳಿದಕ್ಕೆ ಕುಪಿತಕೊಂಡು ದುನಿಯಾ ವಿಜಿ ತನ್ನ ಪಟಾಲವನ್ನೇ ಕರೆದು ಜಗಳಕ್ಕೆ ಮಾಡಿಕೊಂಡಿದ್ದರಂತೆ. ಭಾನುವಾರ ಜೈಲಿನ ಕೈದಿ ನಂಬರ್ ನೀಡುವ ಸಿಬ್ಬಂದಿ ಗೈರಾಗಿದ್ದರಿಂದ ಸ್ಲಂ ಬಾಲನಿಗೆ ಕೈದಿ ನಂಬರ್ ಸಿಕ್ಕಿರಲಿಲ್ಲ. ಇಂದು ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿದ ಬಳಿಕ ಕೈದಿ ನಂಬರ್ ನೀಡಲಾಗಿದೆ. ಭಾನುವಾರ ನಡೆದ ಬೆಳವಣಿಗೆಯಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ವಿಜಿಯವರನ್ನು ಜೈಲಿಗೆ ಕಳುಹಿಸುವ ವೇಳೆಗೆ ರಾತ್ರಿ 10 ಗಂಟೆಯಾಗಿತ್ತು. ರಾತ್ರಿಯಾಗಿದ್ದರಿಂದ ಜೈಲಿನಲ್ಲಿ ಸಿಬ್ಬಂದಿ ಊಟ ನೀಡಿದ್ದರೂ ದುನಿಯಾ ವಿಜಿ ಹಾಗೂ ಅವರ ತಂಡ ಊಟ ನಿರಾಕರಿಸಿ, ಮತ್ತೊಮ್ಮೆ ತಮ್ಮ ಮೊಂಡಾಟವನ್ನು ತೋರಿಸಿದೆ.

ಇದಲ್ಲದೇ ವಿಜಿ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಬೇಕೆಂದು ಮಾರುತಿ ಗೌಡ ಕುಟುಂಬ ಡಿಸಿಎಂಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ವಿಜಿಗೆ ಬೇಲ್ ಸಿಗುತ್ತಾ, ಇಲ್ಲಾ ಜೈಲೇ ಗತಿಯೇ ಎನ್ನುವ ವಿಷಯ ಗೊತ್ತಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *