ಮಾಧ್ಯಮಗಳ ವಿರುದ್ಧ ಮಾಜಿ ಕೈ ಶಾಸಕ ವಸಂತ ಬಂಗೇರ ಕಿಡಿ

ಮಂಗಳೂರು: ಸಮಾಜವನ್ನು ತಿದ್ದುವಂತಹ ಮಾಧ್ಯಮಗಳು ಮೋದಿ ಪರವಾಗಿ ಕೆಲಸ ಮಾಡುತ್ತಿವೆ. ಈ ಮೂಲಕ ತಮ್ಮನ್ನು ಮೋದಿಗೆ ಮಾರಿಕೊಂಡಿದ್ದಾರೆ. ಇದರಿಂದ ಈ ದೇಶವನ್ನು ಹದೋಗತಿಗೆ ಕೊಂಡ್ಯೊತ್ತೀರಿ. ಮೋದಿ ಇದ್ದರೆ ಈ ದೇಶ ಸರ್ವನಾಶವಾಗುತ್ತದೆ ಅಂತ ಮಾಜಿ ಶಾಸಕ ವಸಂತ ಬಂಗೇರ ಕಿಡಿಕಾರಿದ್ದಾರೆ.

ಈ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಯಾರು ಮಾಡುತ್ತಾರೆ ಅವರು ಬದುಕಬಾರದು. ಪತ್ರಿಕೆ ಮತ್ತು ಟಿವಿಯವರು ಕೂಡ ಬದುಕಬಾರದು. ನಾನು ಪತ್ರಿಕೆಗೆ ಮತ್ತು ಟಿವಿಗೆ ಗೌರವ ಕೊಡುವುದಿಲ್ಲ. ನಾನು ಗೌರವ ಕೊಟ್ಟರೆ ನೀಚನಾಗುತ್ತೇನೆ ಎಂದು ಕೋಪದಿಂದ ಹೇಳಿದ್ದಾರೆ. ಇದನ್ನೂ ಓದಿ: ಕೆಲಸ ಮಾಡದಿದ್ರೆ ಜಿಲ್ಲೆಯವನಾದ್ರೂ ಸುಮ್ಮನೆ ಬಿಡೋದಿಲ್ಲ- ಅಧಿಕಾರಿಗೆ ಮಾಜಿ ಶಾಸಕ ಧಮ್ಕಿ

ಗುರುವಾರ ಚಾರ್ಮಾಡಿ ಘಾಟ್ ರಸ್ತೆ ವೀಕ್ಷಣೆಗೆ ತೆರಳಿ ತನ್ನ ಬೆಂಬಲಿಗರ ಎದುರಲ್ಲಿಯೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಮಾಧ್ಯಮಗಳ ಮೇಲೂ ದರ್ಪ ತೋರಿಸಿ ಮಾಧ್ಯಮಗಳ ವಿರುದ್ಧವೂ ಕೆಂಡಾಮಂಡಲರಾಗಿದ್ದಾರೆ.

ವಸಂತ ಬಂಗೇರ ಅಧಿಕಾರದಲ್ಲಿ ಇರುವಾಗಲೂ ದರ್ಪದಿಂದಲೇ ಕುಖ್ಯಾತಿ ಪಡೆದಿದ್ದು, ಸೋಲಿನ ಬಳಿಕವೂ ದರ್ಪ ಮುಂದುವರಿಸಿರೋದು ಚರ್ಚೆಗೆ ಗ್ರಾಸವಾಗಿದೆ.

Comments

Leave a Reply

Your email address will not be published. Required fields are marked *