ತನ್ನ ಬಗೆಗಿನ ಸಿನಿಮಾ ನಿರ್ಮಾಣಕ್ಕೆ ಬಿಎಸ್‍ವೈ ಹೇಳಿದ್ದು ಹೀಗೆ

ಕಲಬುರಗಿ: ಹೆಚ್‍ಡಿಕೆ ಜೀವನ ಚಿತ್ರ ಬೆನ್ನಲ್ಲೇ ಬಿಎಸ್‍ವೈ ನೈಜಜೀವನ ಚಿತ್ರ ನಿರ್ಮಾಣವಾಗಲಿದೆ ಅನ್ನೋ ಮಾತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ನನ್ನ ಬಗ್ಗೆ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ. ಸಿನಿಮಾ ಮಾಡುವ ಬಗ್ಗೆ ನನ್ನನ್ನು ಅನೇಕರು ಒತ್ತಾಯಿಸಿದ್ದಾರೆ. ಆದ್ರೆ ಅವರಿಗೆ ನಾನು ಒಪ್ಪಿಗೆ ನೀಡಿಲ್ಲಾ. ಅದರ ಅವಶ್ಯಕತೆ ಕೂಡ ನನಗಿಲ್ಲಾ ಅಂತಾ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಚುನಾವಣೆ ನಡೆಯುವ ಸಮಯ ಸಮೀಪಿಸುತ್ತಿದೆ. ಹೀಗಾಗಿ ಎಲ್ಲರೂ ಚುನಾವಣೆಯತ್ತ ಗಮನಹರಿಸೋಣ ಅಂತಾ ಹೇಳಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರು ಬೆಳ್ಳೆತೆರೆ ಮೇಲೆ ರಾರಾಜಿಸಲಿದ್ದಾರೆ. ಬಿಎಸ್ ಯಡಿಯೂರಪ್ಪ ಪಾತ್ರಕ್ಕೆ ನಟ ಉಪೇಂದ್ರ ಬಣ್ಣಹಚ್ಚೋ ಸಾಧ್ಯತೆಗಳಿವೆ. ರುದ್ರೇಶ್, ಜಿ. ಮರಿಸ್ವಾಮಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರಲಿದೆ. ಬಿಎಸ್‍ವೈ ಚಿತ್ರಕ್ಕೆ ನಿರ್ದೇಶಕ ಎಂಎಸ್ ರಮೇಶ್ ಆಕ್ಷನ್ ಕಟ್ ಹೇಳಲಿದ್ದಾರೆ. ಯಡಿಯೂರಪ್ಪ ಅವರ ಅನುಮತಿಗಾಗಿ ನಿರ್ಮಾಪಕರು ಕಾಯ್ತಾ ಇದ್ದಾರೆ. ಬಿಎಸ್ ವೈ ಅನುಮತಿ ನೀಡಿದ ತಕ್ಷಣವೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ರುದ್ರೇಶ್ ಹೇಳಿದ್ದರು. ಆದ್ರೆ ಇದೀಗ ಬಿಎಸ್ ವೈ ತನ್ನ ಜೀವನ ಚಿತ್ರಕ್ಕೆ ಅನುಮತಿಯಿಲ್ಲ ಅಂದಿದ್ದಾರೆ.

Comments

Leave a Reply

Your email address will not be published. Required fields are marked *