ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಮನುಷ್ಯರ ಮೇಲೆ ಎಷ್ಟು ಪ್ರೀತಿ ಇತ್ತೋ ಅದಕ್ಕಿಂತ ಜಾಸ್ತಿ ಪ್ರಾಣಿಗಳ ಮೇಲೆ ಪ್ರೀತಿ ಇತ್ತು. ಇದಕ್ಕೆ ಉದಾಹರಣೆ ಮೂಲ ಮಠದಲ್ಲಿ ರೋಧಿಸುತ್ತಿರುವ ಶ್ವಾನ ರೂಬಿ.
ಶಿರೂರು ಶ್ರೀಗಳ ಪ್ರಿಯವಾದ ಸಾಕು ನಾಯಿ ರೂಬಿ. ಸ್ವಾಮೀಜಿ ವೃಂದಾವನಸ್ಥರಾದ ನಂತರ ರೂಬಿಯ ರೋಧನ ಮುಗಿಲು ಮುಟ್ಟಿದೆ. ಸ್ವಾಮೀಜಿಯನ್ನು ಕಾಣದೆ ಮಠದ ಸುತ್ತ ಇದೀಗ ಶ್ವಾನ ರೂಬಿ ಸುತ್ತಾಡುತ್ತಿದೆ. ಹತ್ತು ಸಾವಿರ ರೂಪಾಯಿ ಕೊಟ್ಟು ಸ್ವಾಮೀಜಿಯೇ ನಾಯಿಮರಿ ತಂದಿದ್ರು. ಸದ್ಯ ರೂಬಿ ಯಾರನ್ನು ಮಠದ ಹತ್ತಿರ ಸುಳಿಯಲು ಬಿಡದೆ ಕೋಪಗೊಂಡಿದೆ. ಮಠದ ಸುತ್ತಮುತ್ತ, ಪೊಲೀಸರಿದ್ದು ಅವರನ್ನೂ ಮಠದ ಒಳಗೆ ಹೋಗಲು ರೂಬಿ ಅಡ್ಡಿಪಡಿಸುತ್ತಿದೆ ಎಂದು ತಿಳಿದು ಬಂದಿದೆ.
ಇದಲ್ಲದೆ ಮಠದಲ್ಲಿ ಬಿಳಿ ನಾಯಿಯೊಂದು ಇದ್ದು, ಕಳೆದ ಬಾರಿ ಹಸು ಕಳ್ಳತನವಾದಾಗ ಅದೇ ನಾಯಿ ಕಳ್ಳರನ್ನು ಓಡಿಸಿತ್ತು. ತಿಂಗಳ ಹಿಂದೆ ಡ್ರಮ್ಮರ್ ಶಿವಮಣಿ ಬಂದಾಗ ಅವರೂ ಕೂಡಾ ಸ್ವಾಮೀಜಿಯ ನಾಯಿ ಮೇಲೆ ಪ್ರೀತಿ ತೋರಿದ್ದರು.

Leave a Reply