ಅವನಿಗೆ ಅವಳ್ಮೇಲೆ, ಅವಳಿಗೆ ಇನ್ನೊಬ್ಬನ್ಮೇಲೆ ಲವ್: ನೀನಿಲ್ಲದ ಬದುಕು ಯಾಕೆಂದು ಸತ್ತೇ ಹೋದ!

ಹೈದರಾಬಾದ್: ಪ್ರೀತಿ ಮಾಯೆ ಹುಷಾರು ಎಂದು ನೀವೆಲ್ಲರೂ ಕೇಳಿರುತ್ತೀರಿ. ಅದೇ ಸ್ಟೋರಿ ಇದು. ಪ್ರೀತಿಯ ಹುಚ್ಚುತನಕ್ಕೆ ಸಿಲುಕಿ, ತಾನು ಇಷ್ಟಪಟ್ಟ ಹುಡುಗಿ ತನಗೆ ದಕ್ಕಲಿಲ್ಲ ಎಂದು ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಅಪಾರ್ಟ್ ಮೆಂಟ್ ನಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ.

ಮೆಹಬೂಬಾಬಾದ್ ಜಿಲ್ಲೆಯ ದೋರ್ಣಕಲ್ ಮಂಡಲ್‍ನ ಗೊಲ್ಲಚೆಲ್ಲ ಗ್ರಾಮದ ಜಗದೀಶ್ ಮೃತ ಸಾಫ್ಟ್ ವೇರ್ ಎಂಜಿನಿಯರ್. ಈತ ಮಿಯಾಪುರ್ ಎಂಬಲ್ಲಿನ ಜನಪ್ರಿಯ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದ. ಇದೇ ವೇಳೆ ನೆರೆಹೊರೆಯ ಹುಡುಗಿಯೊಬ್ಬಳಿಗೆ ಲವ್ ಪ್ರಪೋಸ್ ಮಾಡಿದ್ದಾನೆ. ಆದರೆ ಇದಕ್ಕೂ ಮೊದಲೇ ಇನ್ನೊಬ್ಬನ ಜೊತೆ ಲವ್ ಆಗಿದ್ದ ಹುಡುಗಿ ಈತನ ಪ್ರೇಮ ನಿವೇದನೆಯನ್ನು ತಿರಸ್ಕರಿಸುತ್ತಾನೆ. ಆದರೂ ಆತ ಮತ್ತೆ ಮತ್ತೆ ಆಕೆಯನ್ನು ಕಾಡುತ್ತಿದ್ದಿದ್ದರಿಂದ ಬೇಸತ್ತ ಆಕೆ ಬೇರೆ ಕಡೆ ವಾಸ ಬದಲಾಯಿಸುತ್ತಾಳೆ.

ಇದನ್ನೂ ಓದಿ: 2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ಆದರೆ ಆಕೆಯ ಗೆಳೆಯರ ಮೂಲಕ ಆತ ಆಕೆಯ ಫೋನ್ ನಂಬರ್ ಪಡೆದುಕೊಂಡು ಆಕೆಗೆ ಮತ್ತೆ ಕಾಲ್ ಮಾಡುತ್ತಾನೆ. ಫೋನಲ್ಲಿ ಮಾತಾಡ್ತಾ ನೀನಿಲ್ಲದೆ ಈ ಬದುಕೇ ವ್ಯರ್ಥ ಎಂದೆಲ್ಲಾ ಅಂಗಾಲಾಚಿದ್ದಾನೆ. ಈ ವೇಳೆ ಆತ ಏನಾದರೂ ಅನಾಹುತ ಮಾಡಿಕೊಳ್ಳಬಹುದು ಎಂದು ಎಚ್ಚೆತ್ತ ಆಕೆ ಆತನಿಗೆ ವಿಷಯದ ಮನವರಿಕೆ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಆತ ನಾನು ಅಪಾರ್ಟ್ ಮೆಂಟ್ ನ 5ನೇ ಅಂತಸ್ತಿನಿಂದ ಹಾರಿ ಸಾಯುತ್ತೇನೆ ಎಂದು ಬೆದರಿಕೆ ಹಾಕಿ ಕಟ್ಟಡದಿಂದ ಹಾರುತ್ತಾನೆ. ತಕ್ಷಣ ಆಕೆ ಸ್ಥಳಕ್ಕೆ ಬಂದರೂ ಆತ ರಕ್ತದ ಮಡುವಿನಲ್ಲಿ ಬಿದ್ದು ನಿಶ್ಚಲವಾಗಿದ್ದ. ಇಲ್ಲಿಗೆ ಹುಚ್ಚು ಪ್ರೇಮಕ್ಕೆ ಆತ ತನ್ನ ಪ್ರಾಣವನ್ನೇ ತ್ಯಜಿಸಿದ್ದಾನೆ.

ಇದನ್ನೂ ಓದಿ: ಬಾಯ್ ಫ್ರೆಂಡ್ ಮೀಟ್ ಆಗದ್ದಕ್ಕೆ 4ನೇ ಫ್ಲೋರ್‍ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ

ಇದೇ ವೇಳೆ ವಿಷಯ ತಿಳಿದ ಜಗದೀಶ್ ಸಂಬಂಧಿಕರು, ಇದು ಆತ್ಮಹತ್ಯೆಯಲ್ಲ ಕೊಲೆ. ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಲವ್ವರ್ ಬಿಟ್ಟು ಆತನ ಸ್ನೇಹಿತನ ಜೊತೆ ಲವ್: ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

ಇದನ್ನೂ ಓದಿಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

Comments

Leave a Reply

Your email address will not be published. Required fields are marked *