ಮದ್ವೆಯಾಗಿ ಎರಡೇ ದಿನಕ್ಕೆ ಸ್ನೇಹಿತನ ಜೊತೆ ಸರಸಕ್ಕೆ ಸಹಕರಿಸು ಎಂದ ಪತಿ

ಹುಬ್ಬಳ್ಳಿ: ಮದುವೆಯಾಗಿ ಪತ್ನಿಯ ಜೊತೆ ಹನಿಮೂನ್ ಮಾಡಬೇಕಾದ ವ್ಯಕ್ತಿಯೊಬ್ಬ ಸ್ನೇಹಿತನೊಂದಿಗೆ ಸಹಕರಿಸು ಎಂದು ಕಿರುಕುಳ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮದುವೆಯಾದ ಎರಡನೇ ದಿನಕ್ಕೆ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಸ್ನೇಹಿತನೊಂದಿಗೆ ಸರಸ ಸಲಾಪ ಮಾಡಲು ಸಹಕರಿಸುವಂತೆ ಬೆದರಿಸಿ, ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ಹುಬ್ಬಳ್ಳಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಣೇಶಪೇಟೆಯ ಮುಸ್ತಾಕ ಎಂಬವನ ವಿರುದ್ಧ ಆತನ ಪತ್ನಿ ದೂರು ದಾಖಲಿಸಿದ್ದು, 2019ರ ಜುಲೈನಲ್ಲಿ ಮುಸ್ತಾಕ ಜೊತೆ ಮದುವೆ ಆಗಿತ್ತು. ಎರಡು ದಿನ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡ ಪತಿ ಮುಸ್ತಾಕ ನಂತರ ಸ್ನೇಹಿತನನ್ನು ಮನೆಗೆ ಕರೆದುಕೊಂಡು ಬಂದು ಅವನ ಜೊತೆ ಸರಸಕ್ಕೆ ಸಹಕರಿಸಲು ಪೀಡಿಸಿದ್ದಾನೆ.

ಪತ್ನಿ ತನ್ನ ಪತಿಯ ಮಾತಿಗೆ ಒಪ್ಪದಿದ್ದಾಗ ಮಹಿಳಾ ಸಂಘದಲ್ಲಿ ಮಾಡಿರುವ 5 ಲಕ್ಷ ರೂ. ಸಾಲ ತಿರಿಸು. ಇಲ್ಲ ಸ್ನೇಹಿತನ ಜೊತೆ ಸಹಕರಿಸು ಎಂದು ಹಿಂಸೆ ನೀಡಿದ್ದಾನೆ. ಅಲ್ಲದೇ ತನ್ನ ಮಾತು ಕೇಳದಿದ್ದರೆ ಬೆಡ್ ರೂಮಿನಲ್ಲಿ ಕ್ಯಾಮಾರಾ ಇಟ್ಟು ಎಲ್ಲರಿಗೂ ವಿಡಿಯೋ ಕಳುಹಿಸುತ್ತೇನೆ ಎಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸಂತ್ರಸ್ಥೆ ದೂರು ದಾಖಲಿಸಿದ್ದಾಳೆ.

ಈ ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದು, ವಿಕೃತ ಮನಸ್ಸಿನ ಪತಿರಾಯನಿಗೆ ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *