ಸೆಕ್ಸ್ ಬೇಡ ಎಂದ ಪತ್ನಿಯನ್ನೇ ಕೊಂದ ಪತಿಯ ಆರೋಪ ಸಾಬೀತು

ಹುಬ್ಬಳ್ಳಿ: ಲೈಂಗಿಕ ಕ್ರಿಯೆಗೆ ಒಪ್ಪದ ಪತ್ನಿಯ ಮೇಲೆ ಆಕ್ರೋಶಗೊಂಡು ಕತ್ತು ಹಿಸುಕಿ ಹತ್ಯೆಗೈದಿದ್ದ ಪತಿಯ ವಿರುದ್ಧದ ಆರೋಪ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣವನ್ನು ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಕಾಯ್ದಿರಿಸಿದೆ.

ಮುಸ್ತಫಾ ಮೌಲಾಸಾಬ ಗುಲ್ಲಾಶಿ ಅಪರಾಧ ಸಾಬೀತಾದ ವ್ಯಕ್ತಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದ ಮುಸ್ತಫಾ, ಸವದತ್ತಿಯ ಯರಗಟ್ಟಿ ಗ್ರಾಮದ ಗೈಮುಸಾಬ ಜಮಾದಾರ ಪುತ್ರಿ ಆಶಾರನ್ನು ಮದುವೆ ಆಗಿದ್ದನು.

2017, ಫೆ. 2ರ ನಂತರ ಹುಬ್ಬಳ್ಳಿಯ ಮಂಟೂರ ರಸ್ತೆಯ ಬ್ಯಾಳಿ ಪ್ಲಾಟ್‍ನ ಸಂಬಂಧಿ ಮಮತಾಜ ಮೈಸೂರ ಎಂಬವರ ಮನೆಗೆ ಕರೆ ತಂದಿದ್ದನು. ಲೈಂಗಿಕ ಕ್ರಿಯೆಗೆ ಆಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಕ್ರೋಶಗೊಂಡು ಕತ್ತು ಹಿಸುಕಿ ಹತೈಗೈದಿದ್ದನು.

ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್ ಪೆಕ್ಟರ್ ವಿನೋದ್ ಮುಕ್ತೇದಾರ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಬಿರಾದಾರ ದೇವೇಂದ್ರಪ್ಪ ಎನ್ ಅವರು ಮುಸ್ತಫಾ ವಿರುದ್ದದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದ್ದು, ಶಿಕ್ಷೆ ಪ್ರಮಾಣ ಕಾಯ್ದಿರಿಸಿ ಆದೇಶಿಸಿದ್ದಾರೆ.

Comments

Leave a Reply

Your email address will not be published. Required fields are marked *