ಪತ್ನಿ ಜೊತೆ ಜಗಳ – ಇಬ್ಬರು ಮಕ್ಕಳು ಸೇರಿ ಐವರಿಗೆ ಬೆಂಕಿ ಹಚ್ಚಿದ

ಹೈದರಾಬಾದ್: ಪತ್ನಿ ಜೊತೆಗಿನ ಜಗಳಕ್ಕೆ ಪತಿಯೊಬ್ಬ ಇಬ್ಬರು ಮಕ್ಕಳ ಜೊತೆ ಐವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತೆಲಂಗಾಣದ ಸಿದ್ಧಿಪೇಟ್ ಜಿಲ್ಲೆಯ ಕೊಂಡಪಕಾ ಮಂಡಲದಲ್ಲಿ ನಡೆದಿದೆ.

ಲಕ್ಷ್ಮೀರಜ್ಯಾಮ್ ಬೆಂಕಿ ಹಚ್ಚಿದ ಆರೋಪಿ. ಲಕ್ಷ್ಮೀರಜ್ಯಾಮ್ ಹಾಗೂ ಆತನ ಪತ್ನಿಯ ನಡುವೆ ಜಗಳವಾಗಿತ್ತು. ಅಲ್ಲದೆ ಕಳೆದ ಎರಡು ತಿಂಗಳಿನಿಂದ ಪತ್ನಿ ತನ್ನ ಪತಿಯ ಮನೆಗೆ ಹೋಗದೆ ತವರು ಮನೆಯಲ್ಲಿಯೇ ವಾಸಿಸುತ್ತಿದ್ದಳು.

ಪತ್ನಿ ಮನೆಗೆ ಬರಲಿಲ್ಲ ಎಂದು ಲಕ್ಷ್ಮೀರಜ್ಯಾಮ್ ಬೇಸರದಿಂದ ಇದ್ದನು. ಶುಕ್ರವಾರ ಆರೋಪಿ ಪತಿ ಪತ್ನಿಯ ತವರು ಮನೆಗೆ ಹೋಗಿದ್ದಾನೆ. ಈ ವೇಳೆ ತನ್ನ ಪತ್ನಿ, ಇಬ್ಬರು ಮಕ್ಕಳು, ಬಾಮೈದಾ ರಾಜು ಹಾಗೂ ನಾದಿನಿ ಸುನಿತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಐವರನ್ನು ಸ್ಥಳೀಯರು ಸಿಖಂದರಬಾದ್‍ನ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಐವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

Comments

Leave a Reply

Your email address will not be published. Required fields are marked *