ಪತ್ನಿ ಆಸೆ ಈಡೇರಿಸಲು ಯಜಮಾನನನ್ನೇ ಕೊಂದ!

ಚಾಮರಾಜಪೇಟೆ: ಬೆಂಗಳೂರಿನಲ್ಲಿ ವೃದ್ಧ ಜುಗರಾಜ್ ಜೈನ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ವೃದ್ಧನ ಮನೆಯಲ್ಲಿ ಕೆಲಸ ಮಾಡ್ತಿದ್ದ ಬಿಜೊರಾಮ್, ಹೆಂಡತಿಯ ಕಾಟಕ್ಕೆ ಬೇಸತ್ತು ಜುಗರಾಜ್ ಜೈನ್ ಅವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. 15 ಸಾವಿರ ರೂ.ಗೆ ಕೆಲಸ ಮಾಡ್ತಿದ್ದ ಬಿಜೊರಾಮ್‍ಗೆ ಪತ್ನಿ ಹಣ ತರುವಂತೆ ಪ್ರತಿದಿನ ಪೀಡಿಸ್ತಿದ್ಲು. ಇದರಿಂದ ಬೇಸತ್ತಿದ್ದ ಬಿಜೊರಾಮ್ ಪ್ಲಾನ್ ಮಾಡಿ ಓಂಪ್ರಕಾಶ್ ಮಹೇಂದ್ರ ಜೊತೆ ಸೇರಿ ವೃದ್ಧನ ಕೊಲೆ ಮಾಡಿದ್ದಾನೆ. ಇದನ್ನೂ ಓದಿ:  ದೇವಸ್ಥಾನದಲ್ಲಿ ಅರ್ಚಕರ ಶವ ಪತ್ತೆ, ವಿಗ್ರಹ ನಾಪತ್ತೆ 

ಜುಗರಾಜ್ ಜೈನ್ ಅವರನ್ನು ಕೊಲೆ ಮಾಡಿದ ಬಳಿಕ ಚೀಲದಲ್ಲಿ ಚಿನ್ನ, ಹಣ ತುಂಬಿಕೊಂಡು ಚಿತ್ರದುರ್ಗ, ಹುಬ್ಬಳ್ಳಿ ಮೂಲಕ ಗೋವಾಗೆ ಎಸ್ಕೇಪ್ ಆಗಿ, ಅಲ್ಲಿಂದ ರಾಜಸ್ಥಾನಕ್ಕೆ ಹೋಗಿದ್ರು. ಆದರೆ, ಪೊಲೀಸರು ಬೇಟೆಯಾಡಿ 8.75 ಕೆಜಿ ಚಿನ್ನ, 4 ಕೆಜಿ ಬೆಳ್ಳಿ, 53 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *