ವರದಕ್ಷಿಣೆಗಾಗಿ ಪತ್ನಿಯ ಕೊಲೆ- ಅನುಮಾನ ಬರಬಾರೆಂದು ನೇಣು ಬಿಗಿದು ಅಕ್ರಮ ಸಂಬಂಧವಿತ್ತು ಎಂದ ಪತಿ!

ಹುಬ್ಬಳ್ಳಿ: ವರದಕ್ಷಿಣೆಗೆ ಅಮಾಯಕ ಜೀವವೊಂದು ಬಲಿಯಾದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ನಡೆದಿದೆ.

ಲೀವಿನಾ ಜೋಷಪ್ ಗಂಡ ಹೀನ ಕೃತ್ಯಕ್ಕೆ ಬಲಿಯಾದ ಮಹಿಳೆ. ಗಂಡ ಕಿಶೋರ್ ತನ್ನ ಪತ್ನಿ ಲೀವಿನಾಳನ್ನು ಉಸಿರುಗಟ್ಟಸಿ ಸಾಯಿಸಿ ನೇಣು ಹಾಕಿದ್ದಾನೆ.ಶುಕ್ರವಾರ ರಾತ್ರಿ ಲೀವಿನಾಳ ಪತಿ ಕಿಶೋರ್ ಕುಮಾರ್ ಕಂಠ ಪೂರ್ತಿ ಕುಡಿದು ಬಂದು ಪತ್ನಿಯ ಜೊತೆ ಜಗಳ ತೆಗೆದಿದ್ದಾನೆ.

ತಾನು ಮಾಡುತ್ತಿದ್ದ ವ್ಯವಹಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಕಿಶೋರ್ ಪತ್ನಿಗೆ ಕೂಡಲೇ ತವರು ಮನೆಯಿಂದ ಹಣ ತರುವಂತೆ ಹೇಳಿದ್ದಾನೆ. ಆದರೆ ಅದಕ್ಕೆ ಒಪ್ಪದ ಹಿನ್ನಲೆಯಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಯಾರಿಗೂ ಅನುಮಾನ ಬರಬಾರೆಂದು ನೇಣು ಬಿಗಿದು ತಾನೇ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಪೊಲೀಸರು ಕೂಡ ಮೊದಲಿಗೆ ಇದೊಂದು ಸೂಸೈಡ್ ಕೇಸ್ ಎಂದು ತಿಳಿದಿದ್ದಾರೆ.

ಸಾಲದಕ್ಕೆ ಆಕೆಗೆ ಅಕ್ರಮ ಸಂಬಂಧವಿತ್ತು ಅದನ್ನ ಪ್ರಶ್ನಸಿದ್ದಕ್ಕೆ ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಿ ಪೊಲೀಸರನ್ನು ನಂಬಿಸಿದ್ದ. ಆದರೆ ಇಂದು ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಆತ್ಮಹತ್ಯೆಯಿಂದ ಮೃತಪಟ್ಟಿಲ್ಲ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎನ್ನುವ ವರದಿ ಬಂದಿದೆ.

ಈ ಲೀವಿನಾ ಕುಟುಂಬಸ್ಥರು ಪತಿ ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *