ಪ್ರೀತಿಸಿ ಮದ್ವೆಯಾಗಿ ಮಕ್ಕಳಾದ್ಮೇಲೆ ಹೆಂಡ್ತಿ ಬೋರ್ ಅಂತಾ 2 ಕಂದಮ್ಮಗಳ ಜೊತೆ ಪತಿ ಪರಾರಿ!

ಬೆಂಗಳೂರು: ಪ್ರೀತಿಸಿ ಮದುವೆಯಾಗಿ ಮಕ್ಕಳಾದ ಮೇಲೆ ಹೆಂಡತಿ ಬೋರ್ ಎಂದು ಮಕ್ಕಳನ್ನು ಕರೆದುಕೊಂಡು ಪತಿ ಪರಾರಿಯಾಗಿರುವ ಘಟನೆ ಸಿಲಿಕಾಲ್ ಸಿಟಿಯಲ್ಲಿ ನಡೆದಿದೆ.

ನಗರದ ಥಣಿಸಂದ್ರ ನಿವಾಸಿ ಹೇಮಾವತಿ, ಬೆಂಗಳೂರಿನಲ್ಲಿ ಲಾರಿ ಡ್ರೈವರ್ ಆಗಿದ್ದ ಮೂಲತಃ ಮಹಾರಾಷ್ಟ್ರದ ಹುಡುಗ ಪ್ರವೀಣ್ ರಾಥೋಡ್‍ನನ್ನು ಪ್ರೀತಿಸಿ ಮದುವೆಯಾಗಿದ್ದರು. ವಿವಾಹದ ಮೊದ ಮೊದಲು ಚೆನ್ನಾಗಿದ್ದ ಪತಿ ಪ್ರವೀಣ್ ಒಂದು ಮಗು ಆದ ಮೇಲೆ ಅಸಲಿ ಮುಖ ತೋರಿಸಲು ಶುರು ಮಾಡಿದ್ದಾನೆ. ಇದೀಗ ಎರಡನೇ ಮಗು ಆದ ಬಳಿಕ ತನಗೆ ಹೆಂಡತಿ ಬೋರು ಎಂದು ಹೇಳಿ ರಾತ್ರೋ ರಾತ್ರಿ ಇಬ್ಬರು ಕಂದಮ್ಮಗಳನ್ನು ಎತ್ಕೊಂಡು ನಾಪತ್ತೆಯಾಗಿದ್ದಾನೆ.

ಹೇಮಾವತಿ ಕಳೆದ 3 ತಿಂಗಳಿಂದ ಮಹಾರಾಷ್ಟ್ರದ ಪೊಲೀಸ್ ಠಾಣೆಗಳಿಗೆಲ್ಲಾ ಅಲೆದಾಡುತ್ತಿದ್ದಾರೆ. ಮತ್ತೊಂದೆಡೆ ಪ್ರವೀಣ್ ಲಾರಿ ಮಾಲೀಕ ರೆಡ್ಡಿ ಅನ್ನೋರ ಬಳಿ ಸಾಲ ಮಾಡಿ ಅದನ್ನು ವಾಪಸ್ ಕೂಡ ಮಾಡಿಲ್ಲ. ಇದರಿಂದ ಲಾರಿ ಮಾಲೀಕ, ಗಂಡ ಬಿಟ್ಟ ಹೋಗಿದ್ದಾನೆ, ನನ್ನ ಜೊತೆ ಬಂದು ಇರು ಅಂತಾ ಅಶ್ಲೀಲವಾಗಿ ಮಾತಾನಾಡಿ ಹಿಂಸೆ ಕೊಡುತ್ತಾ ಇದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಕರ್ನಾಟಕದ ಪೊಲೀಸರು ಈ ವಿಚಾರದಲ್ಲಿ ಸಹಾಯ ಮಾಡುತ್ತಿಲ್ಲ, ತನಗೆ ಗಂಡ ಬೇಡ, ಇಬ್ಬರು ಕಂದಮ್ಮಗಳನ್ನು ವಾಪಸ್ ಕೊಡಿಸಿ ಎಂದು ಹೇಮಾವತಿ ಕಣ್ಣೀರು ಇಡುತ್ತಿದ್ದಾರೆ.

 

Comments

Leave a Reply

Your email address will not be published. Required fields are marked *