ಒಂದೂವರೆ ವರ್ಷದ ಪ್ರೀತಿ ಬಳಿಕ ಮದುವೆ – ಮೊದಲ ರಾತ್ರಿಯ ಮರುದಿನವೇ ಪತಿ ಪರಾರಿ

ತುಮಕೂರು: ಒಂದು ವರ್ಷ ಪ್ರೀತಿಸಿ ಮದುವೆಯಾದ ಮೊದಲ ರಾತ್ರಿ ಮರುದಿನವೇ ವರ ಪರಾರಿಯಾದ ಘಟನೆಯೊಂದು ತುಮಕೂರಿನ ಶಾಂತಿನಗರದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ಮಂಚೇಗೌಡನಹಳ್ಳಿಯ ಶ್ರೀನಿವಾಸ್ ಎಂಬಾತನೇ ಪರಾರಿಯಾಗಿದ್ದು, ಪೊಲೀಸರು ಈಗ ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಏನಿದು ಪ್ರಕರಣ?: ಶಾಂತಿನಗರದ ಯುವತಿ ಹಾಗೂ ಮಂಚೇಗೌಡನಹಳ್ಳಿಯ ಶ್ರೀನಿವಾಸ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಆದ್ರೆ ಇವರಿಬ್ಬರ ಮದುವೆಗೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇವರಿಬ್ಬರು ಸ್ಥಳೀಯ ದೇವಸ್ಥಾನವೊಂದರಲ್ಲಿ ಏಪ್ರಿಲ್ 20 ರಂದು ಮದುವೆಯಾಗಿದ್ದಾರೆ. ಅದೇ ದಿನ ರಾತ್ರಿ ಯುವತಿಯ ಮನೆಯಲ್ಲಿ ಪ್ರಸ್ತದ ಶಾಸ್ತ್ರವೂ ಮುಗಿದಿದೆ. ಆದ್ರೆ ಬೆಳಗ್ಗೆ ಎದ್ದ ವರ ಶ್ರೀನಿವಾಸ್ ವಿವಾಹ ನೋಂದಣಿ ಮಾಡಲು ದಾಖಲೆಪತ್ರ ತರ್ತಿನಿ ಎಂದು ಹೊರಟವನು ವಾಪಸ್ ಬರಲೇ ಇಲ್ಲ.

ಇತ್ತ ಪತಿಯ ಬರುವಿಕೆಗಾಗಿ ಕಾಯುತ್ತಿದ್ದ ಯುವತಿ ಸಾಕಷ್ಟು ಹುಡುಕಾಟ ನಡೆಸಿದ್ದು, ಸಿಗದೇ ಇದ್ದಾಗ ಕೊನೆಗೆ ಮೇ 25ರಂದು ಮಹಿಳಾ ಠಾಣೆಯಲ್ಲಿ ಪತ ನಾಪತ್ತೆಯಾಗಿರೋ ಗಂಡ ಬಗ್ಗೆ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ಶ್ರೀನಿವಾಸ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *