2ನೇ ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ವಿರೋಧ-ಇಬ್ಬರು ಬೇಡ ಅಂತಾ ವಿಷ ಕುಡಿದ ಪತಿ

ಕೋಲಾರ: ಗಂಡ-ಹೆಂಡತಿ ನಡುವೆ ಜಗಳ ಆಗಿ ಅದು ಪಂಚಾಯ್ತಿವರೆಗೂ ಹೋಗಿದ್ದಕ್ಕೆ ಮನನೊಂದು ಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಮಾಲೂರು ಪಟ್ಟಣದ ಜಯ ಕರ್ನಾಟಕ ವೇದಿಕೆ ಕಚೇರಿಯಲ್ಲಿ ನಡೆದಿದೆ.

ನಾಗರಾಜ್ ರಾವ್ ಆತ್ಮಹತ್ಯೆ ಮಾಡಿಕೊಂಡ ಪತಿ. ನಾಗರಾಜ್ ರಾವ್ ಹಾಗೂ ಎರಡನೇ ಪತ್ನಿ ರುಕ್ಮಿಣಿ (ಹೆಸರು ಬದಲಾಯಿಸಲಾಗಿದೆ) ನಡುವೆ ಜಗಳ ನಡೆದಿದೆ. ನಾಗರಾಜರಾವ್ ಇತ್ತೀಚೆಗೆ ಎರಡನೇ ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಶ್ವೇತಾ (ಹೆಸರು ಬದಲಾಯಿಸಲಾಗಿದೆ) ತೀವ್ರ ವಿರೋಧಿಸಿದ್ದರು.

ಜಯ ಕರ್ನಾಟಕ ವೇದಿಕೆ ತಾಲೂಕು ಅಧ್ಯಕ್ಷ ನಾರಾಯಣ ರೆಡ್ಡಿ ಸಮ್ಮುಖದಲ್ಲಿ ನಡೆದ ಪಂಚಾಯ್ತಿಯಲ್ಲಿ ವಿಷ ಕುಡಿದು ಸಾವನ್ನಪ್ಪಿದ್ದಾರೆ.

ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *