ಪತ್ನಿಗೆ ಛೇಡಿಸಿದ ಬೀದಿಕಾಮಣ್ಣನಿಗೆ ಪತಿ ಗೂಸಾ

ಮೈಸೂರು: ಪತ್ನಿಗೆ ಛೇಡಿಸಿದ ಬೀದಿಕಾಮಣ್ಣನಿಗೆ ಪತಿ ಗೂಸಾ ನೀಡಿರುವ ಘಟನೆ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ನಡೆದಿದೆ.

ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದ ನಾಗಿಣಿಯನ್ನು ಬೀದಿಕಾಮಣ್ಣ ಮಂಜು ಛೇಡಿಸಿದ್ದಾನೆ. ವಿಚಾರ ತಿಳಿದ ನಾಗಿಣಿ ಪತಿ ರಮೇಶ್ ಗೌಡ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬೃಂದಾವನ ಬಡಾವಣೆ ಬಳಿ ಮಂಜುನನ್ನು ಹಿಡಿದು ಸಾರ್ವಜನಿಕರ ಎದುರಲ್ಲೇ ಗೂಸಾ ಕೊಟ್ಟಿದ್ದಾರೆ.

ನಂತರ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮಂಜನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಗೂಸಾ ತಿಂದ ಬೀದಿ ಕಾಮಣ್ಣನನ್ನು ಪೊಲೀಸರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *