ಪ್ರಶ್ನೆ ಮಾಡಿದವರಿಗೆ ಹುಣಸೂರು ಶಾಸಕ ಏಕ ವಚನದಲ್ಲೆ ಅವಾಜ್

ಮೈಸೂರು: ಮತದಾರರು ಸಾರ್ವಜನಿಕವಾಗಿ ಶಾಸಕರನ್ನು ಪ್ರಶ್ನಿಸುವುದೇ ತಪ್ಪಾ?. ಒಂದು ವೇಳೆ ಪ್ರಶ್ನಿಸಿದರೆ ಪ್ರಶ್ನೆ ಮಾಡಿದವರ ಕುಟುಂಬಸ್ಥರನ್ನು ಉದಾಹರಣೆಗೆ ತೆಗೆದುಕೊಂಡು ಏಕ ವಚನದಲ್ಲೇ ಮಾತನಾಡುವುದು ಶಾಸಕರು ಸುಸಂಸ್ಕೃತ ವರ್ತನೆಯಾ? ಇಂತಹ ಪ್ರಶ್ನೆ ಮೂಡಿಸುವಂತಹ ವಿಡಿಯೋ ಈಗ ವೈರಲ್ ಆಗಿದೆ.

ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕ ಎಚ್‍ಪಿ ಮಂಜುನಾಥ್ ಅವರೇ ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಪ್ರಶ್ನಿಸಿದ ವ್ಯಕ್ತಿಗಳಿಗೆ ಹೀನಾಮಾನವಾಗಿ ಗದರಿಸಿದ್ದಾರೆ.

ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಚ್‍ಪಿ ಮಂಜುನಾಥ್ ಇಂತಹ ವರ್ತನೆ ಪ್ರದರ್ಶಿಸಿದ್ದಾರೆ. ಭಾಷಣ ಮಾಡುವಾಗ ಮಧ್ಯ ವ್ಯಕ್ತಿಯೊಬ್ಬ ಶೌಚಾಲಯ ಕಟ್ಟುವ ವಿಚಾರದಲ್ಲಿ ಅಧಿಕಾರಿಯೊಬ್ಬರ ನಡೆ ಬಗ್ಗೆ ಪ್ರಶ್ನಿಸಿದ್ದಾರೆ.

ಕೋಪಗೊಂಡು ಬಾರೋ ನೀನೇ ಮೈಕ್ ಮುಂದೆ ಬಂದು ಮಾತಾಡು. ನಿನ್ನ ಹೆಂಡತಿ ಬೆಳಗ್ಗೆ ನಾಲ್ಕು ಗಂಟೆಗೆ ಬಯಲು ಪ್ರದೇಶದಲ್ಲಿ ಶೌಚಾಲಯಕ್ಕೆ ಕೂತಾಗ ಆಕೆಯನ್ನು ಅಲ್ಲಿಂದ್ದ ಎದ್ದೇಳಿಸಲು ಆ ಅಧಿಕಾರಿ ಬಂದು ಸಿಟಿ ಊದಬೇಕಿತ್ತೇನೋ. ನೀನು ದೊಡ್ಡ ಸ್ವಾಭಿಮಾನಿ ಸುಮ್ನೆ ನಿಂತುಕೋ ಎಂದು ದರ್ಪದಿಂದ ಮಾತನಾಡಿದ್ದಾರೆ.

ಸಭೆಯಲ್ಲಿ ನಡೆದ ಕೆಲ ಗದ್ದಲದ ವೇಳೆಯೂ ಶಾಸಕ ಎಚ್‍ಪಿ ಮಂಜುನಾಥ್ ಅವರು ತಮ್ಮನ್ನು ಪ್ರಶ್ನಿಸಿದವರ ಮೇಲೆ ಏಕ ವಚನದಲ್ಲೇ ಮಾತನಾಡಿದ್ದಾರೆ.

Comments

Leave a Reply

Your email address will not be published. Required fields are marked *