ಮುಂದುವರಿದ ಹುಚ್ಚಾಟ- ಮಂಡ್ಯದಲ್ಲೂ ದಾಂಧಲೆ ಮಾಡಿದ್ದಕ್ಕೆ ಹುಚ್ಚ ವೆಂಕಟ್‍ಗೆ ಗೂಸ

ಮಂಡ್ಯ: ಕೊಡಗು ಆಯ್ತು, ಮೈಸೂರು ಆಯ್ತು, ಈಗ ಮಂಡ್ಯ ಸರದಿ ಎನ್ನುವಂತೆ ಹುಚ್ಚ ವೆಂಕಟ್ ಹುಚ್ಚಾಟ ಮುಂದುವರಿದಿದೆ. ಮಂಡ್ಯದಲ್ಲಿ ಕಂಠಪೂರ್ತಿ ಕುಡಿದು ಹುಚ್ಚ ವೆಂಕಟ್ ದಾಂಧಲೆ ಮಾಡಿದ್ದಾನೆ.

ಕೊಡಗಿನಲ್ಲಿ ಗಲಾಟೆ ಮಾಡಿದ ರೀತಿಯಲ್ಲೇ ಕಾರಿಗೆ ಕಲ್ಲು ಒಡೆದು ಹುಚ್ಚ ವೆಂಕಟ್ ದಾಂಧಲೆ ಮಾಡಿದ್ದಾನೆ. ಮಂಡ್ಯ ನಗರದ ಹೋಟೆಲ್ ಜ್ಯೋತಿ ಇಂಟರ್ನ್ಯಾಷನಲ್ ಬಳಿ ಈ ಘಟನೆ ನಡೆದಿದೆ. ಕೊಡಗಿನ ಘಟನೆ ಮಾಡಿದ ಬಳಿಕ ಬೆಂಗಳೂರಿನತ್ತ ವೆಂಕಟ್ ತೆರಳುತ್ತಿದ್ದನು. ಆದರೆ ಶನಿವಾರ ಮಂಡ್ಯಕ್ಕೆ ಬಂದ ವೆಂಕಟ್ ರಾತ್ರಿ ಹಾಗೂ ಇಂದು ಬೆಳಿಗ್ಗೆ ಮದ್ಯದಂಗಡಿಯಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ್ದಾನೆ. ಇದನ್ನೂ ಓದಿ:ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ- ಸ್ಥಳೀಯರಿಂದ ಗೂಸಾ

ಮದ್ಯ ಸೇವಿಸುವ ವೇಳೆ ವೆಂಕಟ್‍ಗೆ ಮಂಡ್ಯದ ಇಬ್ಬರು ಯುವಕರ ಪರಿಚಯವಾಗಿತ್ತು. ಆದರೆ ಕಂಠಪೂರ್ತಿ ಕುಡಿದ ಮೇಲೆ ನಶೆಯಲ್ಲಿ ಪರಿಚಯವಾದ ಯುವಕರ ಕಾರಿಗೆ ಕಲ್ಲೂ ತೂರಿ ಗಲಾಟೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವಕರು ವೆಂಕಟ್‍ನನ್ನು ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ನಂತರ ಪೊಲೀಸರು ಬಲವಂತವಾಗಿ ಹುಚ್ಚ ವೆಂಕಟ್‍ನನ್ನು ಹೋಟೆಲ್ನಿಂದ ಖಾಲಿ ಮಾಡಿಸಿದ್ದಾರೆ. ಬಳಿಕ ತನ್ನ ಲಗೇಜ್ ತೆಗೆದುಕೊಂಡು ಕಾರಿನಲ್ಲಿ ಬೆಂಗಳೂರು ಕಡೆಗೆ ಹುಚ್ಚ ವೆಂಕಟ್ ತೆರೆಳಿದ್ದಾನೆ. ಈ ಗಲಾಟೆಯಿಂದ ಹೋಟೆಲ್ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ಅವರನ್ನು ಪೊಲೀಸರು ಅಲ್ಲಿಂದ ಕಳುಹಿಸಿದ್ದಾರೆ.

https://www.youtube.com/watch?v=QUTfYfL7siE

Comments

Leave a Reply

Your email address will not be published. Required fields are marked *