ಪ್ಲೀಸ್ ಒಂದು ದಿನ ಹೌಸ್‍ಫುಲ್ ಮಾಡಿ: ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡ ಹುಚ್ಚ ವೆಂಕಟ್

ಬೆಂಗಳೂರು: ನನ್ ಮಗಂದ್, ನನ್ ಎಕ್ಕಡಾ ಎಂಬ ಬೈಗುಳದ ಮಾತುಗಳಿಂದಲೇ ಫೇಮಸ್ ಆಗಿದ್ದ ಹುಚ್ಚ ವೆಂಕಟ್ ಈ ಬಾರಿ ಗಳಗಳನೇ ಕಣ್ಣೀರು ಹಾಕುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ಬಾಹುಬಲಿ-2′ ಸಿನಿಮಾ ಬಿಡುಗಡೆಯಂದೇ ಹುಚ್ಚ ವೆಂಕಟ್ ನಿರ್ದೇಶಿಸಿ, ನಿರ್ಮಿಸಿ, ನಟಿಸಿದ `ಪೊರ್ಕಿ ಹುಚ್ಚ ವೆಂಕಟ್’ ಎಂಬ ಸಿನಿಮಾವನ್ನು ಬಿಡುಗಡೆ ಮಾಡಿದ್ದರು. ಇಡೀ ದೇಶವೇ ಬಾಹುಬಲಿ-2 ಚಿತ್ರಕ್ಕೆ ಕಾತರರಾಗಿ ಕುಳಿತಿದ್ದ ಸಮಯದಲ್ಲಿ ವೆಂಕಟ್ ಈ ಚಿತ್ರವನ್ನು ರಿಲೀಸ್ ಮಾಡಿದ್ದರು.

ಕನ್ನಡಿಗರು ನನ್ನ ಚಿತ್ರ ನೋಡುತ್ತಾರೆ. ನನ್ನನ್ನು ಪ್ರೀತಿಸಿ, ಪ್ರೋತ್ಸಾಹಿಸುತ್ತಾರೆ ಅನ್ನೋ ನಂಬಿಕೆಯಿಂದ ಅವರು ಚಿತ್ರವನ್ನು ಬಿಡುಗಡೆಗೊಳಿಸಿದ್ದರು. ಆದ್ರೆ ಜನ ಕನ್ನಡ ಸಿನಿಮಾ ನೋಡಲು ಬದಲು ತೆಲುಗು ಚಿತ್ರ ಬಾಹುಬಲಿ-2 ಚಿತ್ರವನ್ನು ವೀಕ್ಷಿಸುವಲ್ಲಿ ಮುಗಿಬಿದ್ದಿದ್ದಾರೆ. ಇದರಿಂದ ಹುಚ್ಚ ವೆಂಕಟ್ ಅವರಿಗೆ ಕನ್ನಡಿಗರ ಮೇಲಿದ್ದ ನಿರೀಕ್ಷೆ ಹುಸಿಯಾಯ್ತು. ಹೀಗಾಗಿ ಮನನನೊಂದ ವೆಂಕಟ್ ವೀಡಿಯೋ ಮೂಲಕ ಕಣ್ಣೀರು ಹಾಕುತ್ತಾ ನನ್ನ ಸಿನಿಮಾ ನೋಡಿ ಎಂದು ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡಿದ್ದಾರೆ.

ದಯವಿಟ್ಟು ನನ್ನ ಸಿನಿಮಾ ನೋಡಿ, ಇಲ್ಲವಾದಲ್ಲಿ ನಾನು ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ. ಒಂದು ದಿನ ಹೌಸ್ ಫುಲ್ ಮಾಡಿ ಪ್ಲೀಸ್ ಅಂತಾ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ. ದುಡ್ಡು ಕೊಟ್ಟು ಹುಚ್ಚ ವೆಂಕಟ್ ಸಿನಿಮಾ ನೋಡಲು ಆಗಲ್ಲ ಅಂತಂದ್ರೆ ಫ್ರೀ ಆಗಿ ನೋಡಲು ಕೆ.ಜಿ ರೋಡ್ ನಲ್ಲಿರೋ ಅನುಪಮಾ ಥಿಯೇಟರ್ ಗೆ ಬನ್ನಿ. ಸಿನಿಮಾ ನೋಡಿದ ಬಳಿಕ ಈ ಸಿನಿಮಾಕ್ಕೊಂದು ವ್ಯಾಲ್ಯು ಇದೆ ಅಂತಾ ಹಣ ಕೊಡಲು ಮನಸ್ಸಾದ್ರೆ ನೀಡಿ ಅಂತಾ ಹುಚ್ಚ ವೆಂಕಟ್ ಹೇಳಿದ್ದಾರೆ.

ಮೊನ್ನೆ ಒಂದು ಕುಟುಂಬ ಬಂದು ನನ್ನೊಂದಿಗೆ ಸೆಲ್ಫಿ ತಗೊಂಡ್ರು. ಆ ಬಳಿಕ ತೆಲುಗು ಚಿತ್ರಕ್ಕೆ ಹೋದ್ರು. ಫೋಟೋಗೆ ಮಾತ್ರ ನಾನು ಬೇಕಾ. ನಾಳೆ ಕಷ್ಟ ಅಂತಾ ಬಂದ್ರೆ ತೆಲುಗು ಅವನು ಬರಲ್ಲ ಕನ್ನಡಿಗನಾಗಿರೋ ನಾನು ಬರ್ತೀನಿ. ಈ ಸಿನಿಮಾ ಪ್ಲಾಪ್ ಆದ್ರೂ ಕನ್ನಡಿಗರ ಕಷ್ಟಕ್ಕೆ ನಾನು ಯಾವತ್ತೂ ಸ್ಪಂದಿಸುತ್ತೇನೆ ಅಂತಾ ಹೇಳುತ್ತಾ ವೆಂಕಟ್ ಅತ್ತುಬಿಟ್ರು. ಸದ್ಯ ಇವರ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *