ಹಳೇ ದ್ವೇಷ – 12 ಬಾರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ

ಹುಬ್ಬಳ್ಳಿ: ಹಳೆಯ ದ್ವೇಷದ ಹಿನ್ನಲೆಯಲ್ಲಿ ಹಾಡಹಗಲೇ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಕಸಬಾಪೇಟೆಯ ಪಠಾಣಗಲ್ಲಿಯಲ್ಲಿ ನಡೆದಿದೆ.

ಶಂಶುದ್ದೀನ್ ಅನ್ನು ಕೊನೆಯಾದ ಯುವಕ. ಹಾಜಿ ಶಂಶುದ್ದೀನ್ ಅನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಕೆಲವು ದಿನಗಳ ಹಿಂದೆ ಹಾಜಿ ಮತ್ತು ಸಂಶುದ್ದೀನ್ ನಡುವೆ ಜಗಳವಾಗಿತ್ತು. ಈ ಜಗಳದಲ್ಲಿ ಶಂಶುದ್ದೀನ್ ಹಾಜಿಯ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಈ ಜಗಳವಾದ ನಂತರ ಊರಿನ ಹಿರಿಯರು ಹಾಜಿ ಮತ್ತು ಶಂಶುದ್ದೀನ್ ಅನ್ನು ಕರೆಸಿ ಜಗಳ ಮಾಡಿಕೊಳ್ಳದಂತೆ ಬುದ್ಧಿ ಹೇಳಿದ್ದರು. ಆದರೆ ಇಂದು ಶಂಶುದ್ದೀನ್ ಮತ್ತೆ ಹಾಜಿ ಮುಖಾಮುಖಿಯಾದಾಗ ಜಗಳಕ್ಕೆ ಇಳಿದಿದ್ದಾರೆ. ಇಬ್ಬರ ನಡುವೆ ಗಲಾಟೆಯಾಗಿ ಅದು ವಿಕೋಪಕ್ಕೆ ಹೋಗಿ ಹಾಜಿ 12 ಬಾರಿ ಚಾಕುವಿನಿಂದ ಇರಿದು ಶಂಶುದ್ದೀನ್ ಅನ್ನು ಹತ್ಯೆಗೈದಿದ್ದಾನೆ.

ಈ ಸಂಬಂಧ ಸ್ಥಳಕ್ಕೆ ಕಸಬಾಪೇಟೆ ಪೋಲಿಸರು ಬಂದಿದ್ದು ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *