ಆರೋಗ್ಯ ಸಚಿವರ ತವರು ಜಿಲ್ಲಾಸ್ಪತ್ರೆ ಈಗ ಹಂದಿಗಳ ವಾಸ ಸ್ಥಳ

ಬಳ್ಳಾರಿ: ಸದಾ ಅವ್ಯವಸ್ಥೆಗಳ ಮೂಲಕವೇ ಸುದ್ದಿಯಾಗುವ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಲ್ಯಾಣ ಕರ್ನಾಟಕದ ಬಹು ದೊಡ್ಡ ಆಸ್ಪತ್ರೆ ಅಂದರೆ ಅದು ಗಣಿ ನಾಡು ಬಳ್ಳಾರಿ ವಿಮ್ಸ್ ಆಸ್ಪತ್ರೆ. ಆದರೆ ಆಸ್ಪತ್ರೆ ಈಗ ಹಂದಿಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ರೋಗಿಗಳಿಗೆ ಆರೋಗ್ಯವನ್ನು ನೀಡಬೇಕಾದ ಆಸ್ಪತ್ರೆಯೇ ರೋಗ ಹರಡುವ ಸ್ಥಳವಾಗಿದೆ.

ಬಳ್ಳಾರಿ ವಿಮ್ಸ್ ಆಸ್ಪತ್ರೆಯನ್ನು 10 ಎಕೆರೆ ಜಾಗದಲ್ಲಿ ನಿರ್ಮಿಸಲಾಗಿದೆ. ಆದರೆ ಆಸ್ಪತ್ರೆಯ ಬಹುತೇಕ ಭಾಗದಲ್ಲಿ ಚರಂಡಿ ನೀರು, ಒಳಚರಂಡಿ ಕೊಳಕು ನೀರು ಹರಿದು ಬರುತ್ತೆ. ಜೊತೆಗೆ ಇದೇ ನೀರಿನಲ್ಲಿ ಹಂದಿಗಳು ವಾಸ ಮಾಡುತ್ತವೆ. ಆಸ್ಪತ್ರೆಯ ಆವರಣದಲ್ಲಿ ಸುಮಾರು ನೂರಕ್ಕೆ ಹೆಚ್ಚು ಹಂದಿಗಳು ದಂಡೆ ಇದೆ. ಹೀಗಿದ್ದರೂ ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಲು ವಿಮ್ಸ್ ಆಡಳಿತ ಮಂಡಳಿ ಮುಂದಾಗಿಲ್ಲ.

ಚಿಕಿತ್ಸೆಗಾಗಿ ರಾಯಚೂರು. ಬಳ್ಳಾರಿ ಪಕ್ಕದ ಆಂಧ್ರ ಪ್ರದೇಶದ ಸಾವಿರಾರು ಜನ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಹೀಗೆ ಚಿಕಿತ್ಸೆಗೆ ಬಂದವರು ರೋಗಿಗಳ ಜೊತೆಯಲ್ಲಿ ಅವರ ಸಂಬಂಧಿಕರು ಸಹ ಆಸ್ಪತ್ರೆಗೆ ಬಂದಿರುತ್ತಾರೆ. ಆದರೆ ಬಂದವರಿಗೆ ಆಸ್ಪತ್ರೆಯಲ್ಲಿ ಮಲಗುವ ವ್ಯವಸ್ಥೆ ಇರುವುದಿಲ್ಲ.

ಹೀಗಾಗಿ ಜನ ಆಸ್ಪತ್ರೆಯ ಕೊಳಕು ನೀರು ಇರುವ ಪಕ್ಕದ ಜಾಗದಲ್ಲಿಯೇ ಇದೇ ಆವರಣದಲ್ಲಿ ಮಲಗುತ್ತಾರೆ. ಇಲ್ಲಿಯೇ ಊಟ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಹೀಗಾಗಿ ರೋಗಿಗಳ ಜೊತೆಯಲ್ಲಿ ಬಂದವರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದ ಅತಿ ದೊಡ್ಡ ಆಸ್ಪತ್ರೆ ಅವ್ಯವಸ್ಥೆ ಗಮನಕ್ಕೆ ಬಂದರೂ ಆರೋಗ್ಯ ಸಚಿವ ಶ್ರೀರಾಮುಲು ಸುಮ್ಮನಿದ್ದಾರೆ. ಸರ್ಕಾರ ಉಳಿಸುವ ಮಂತ್ರಿಗಿರಿ ಪಡೆಯುವಲ್ಲಿ ಕಾಲ ಕಳೆಯುವ ಈ ಮಂತ್ರಿಗಳಿಗೆ ಈ ಆಸ್ಪತ್ರೆಯ ಪರಿಸ್ಥಿತಿ ಯಾಕೆ ಕಾಣುತಿಲ್ಲಾ ಎಂಬುದು ಜನರ ಪ್ರಶ್ನೆಯಾಗಿದೆ.

Comments

Leave a Reply

Your email address will not be published. Required fields are marked *