ಸಿದ್ರಾಮುಲ್ಲಾ ಖಾನ್ ಸಿಎಂ ಆದ್ರೆ ಹಿಂದೂಗಳ ಹತ್ಯೆ ಆಗುತ್ತೆ: ಸಿ.ಟಿ ರವಿ

ಚಿಕ್ಕಮಗಳೂರು: ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದೂಗಳ ಹತ್ಯೆ ಆಗುತ್ತೆ. ನಾವು ಬಂದರೆ ಹಿಂದೂ ಅರ್ಚಕರ ನೇಮಕವಾಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C T Ravi) ಹೇಳಿದರು.

ಚಿಕ್ಕಮಗಳೂರಿನ ಕೊಪ್ಪಾದಲ್ಲಿ ಜನ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿ, ಎಲೆಕ್ಷನ್ ಬಂದಾಗ ನಾನು ಹಿಂದೂ. ಆಮೇಲೆ ಕುಂಕುಮ ಕಂಡರೆ ಆಗಲ್ಲ. ಈಗ ಇರೋರು ಇಟಲಿ ಗಾಂಧಿಗಳು ಎಂದರು. ಇದನ್ನೂ ಓದಿ: ಎಂಗೇಜ್ಮೆಂಟ್ ಆದ್ಮೇಲೆ ನಿನ್ನ ಮದುವೆ ಆಗ್ತೀನಂತ ಕಾಡ್ತಿದ್ದ ಯುವತಿ – ಮನೆಬಿಟ್ಟು ಮಾಯವಾದ ಮರೆಪ್ಪ

ಸರ್ಕಾರ ಬಂದರೆ ಮುಸ್ಲಿಂ ಸಿಎಂ ಮಾಡ್ತೀವಿ. ಅವರಪ್ಪನಾಣೆ ಅಧಿಕಾರಕ್ಕೆ ಬರಲ್ಲ. ಮುಸ್ಲಿಮರಿಗೆ ತುಪ್ಪವನ್ನ ನೆಕ್ಕಲು ಅಲ್ಲ, ಮೂಸೋದಕ್ಕೂ ಬಿಡಲ್ಲ. ಟಿಪ್ಪು ಯುನಿವರ್ಸಿಟಿ ಮಾಡಿ ಜಿಹಾದಿ ಹೇಳಿ ಕೊಡ್ತಾರಂತೆ. ಟಿಪ್ಪು ಯುನಿವರ್ಸಿಟಿಗೆ ಕಲ್ಲು ಹಾಕೋದಕ್ಕೂ ಬಿಡಲ್ಲ. ಮೈಸೂರಿಗೆ ನೀವು ಮಾಡ್ತಿರೋ ಮೋಸಕ್ಕೆ ಜನ ಉತ್ತರ ಕೊಡ್ತಾರೆ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ (Congress) ಹೇಳುತ್ತೆ ಹಿಂದೂ ಕಟ್ಟ ಶಬ್ಧ. ಸೈನಿಕರು ಭೇಟಿಯಾದರೆ ಜೈ ಹಿಂದ್ ಅನ್ನುತ್ತಾರೆ. ಮುಟ್ಟಾಳ ಕಾಂಗ್ರೆಸ್ ಗೆ ಗೊತ್ತಾಗುವಂತೆ ಕೂಗಿ ಹೇಳಿ. ವಿಜಯನಗರ ಸಾಮಾಜ್ರ್ಯ ಸ್ಥಾಪನೆಯಾಗಿದ್ದು ಹಿಂದೂ ರಕ್ಷಣೆ. ಅವರಿಗೆ ತಾಕತ್ತಿದ್ದರೆ ಹೇಳಲಿ ನಮಗೆ ಹಿಂದೂ ವೋಟು ಬೇಡ. ನಿಮ್ಮಂಥ ನಾಮರ್ಧರಿಗೆ ಮತ ಹಾಕಲ್ಲ ಅನ್ನಬೇಕು. ತಂದೆ ಬಗ್ಗೆ ಅಪನಂಬಿಕೆ ಇರೋರು ಸೈನಿಕರನ್ನ ಅನುಮಾನಿಸುತ್ತಾರೆ. ಸೈನಿಕರನ್ನೂ ಅನುಮಾನಿಸುತ್ತಾರೆ ಕಾಂಗ್ರೆಸ್. ಬಾಂಬ್ ಹಾಕುವವರಿಗೆ ಬಿರಿಯಾನಿ ಕೊಡೋದು ಕಾಂಗ್ರೆಸ್ ನೀತಿ ಎಂದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *