ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡ್ಬೇಕು, ಅನ್ಯಧರ್ಮೀಯರು ಕಣ್ಣೆತ್ತಿ ನೋಡಿದ್ರೆ ತಲೆ ಕಡೀಬೇಕು: ಸಾಧ್ವಿ ಸರಸ್ವತಿ

ಬೆಳಗಾವಿ: ಗೋ ಹತ್ಯೆ ಮಾಡೋರನ್ನ ತಲೆ ಕಡೀಬೇಕು. ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡಬೇಕು. ತಮ್ಮನ್ನು ಕಣ್ಣೆತ್ತಿ ನೋಡೋ ವಿಧರ್ಮಿಯರ ತಲೆ ಕಡೀಬೇಕು ಎಂದು ಮಹಿಳಾ ಸನ್ಯಾಸಿನಿ, ಚೈತನ್ಯ ಪೀಠದ ಪ್ರಚಾರಕಿ ಸಾಧ್ವಿ ಸರಸ್ವತಿ ಹೇಳಿದ್ದಾರೆ.

ಬೆಳಗಾವಿಯ ಗುಜರಾತ್ ಭವನದಲ್ಲಿ ಬಜರಂಗದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಹೋದರಿಯರೊಂದಿಗೆ ಲವ್ ಜಿಹಾದ್ ಮಾಡಲಾಗ್ತಿದೆ. ಶಾಲೆ-ಕಾಲೇಜುಗಳು, ಟ್ಯೂಷನ್ ಸೆಂಟರ್‍ಗಳು, ಬಟ್ಟೆಯಂಗಡಿ, ಮೊಬೈಲ್ ಅಂಗಡಿಗಳಲ್ಲಿ ಲವ್ ಜೆಹಾದ್ ಜಾಸ್ತಿಯಾಗ್ತಿದೆ ಎಂದರು.

ಲವ್ ಜಿಹಾದ್ ತಪ್ಪಿಸಲು ರಕ್ಷಾ ಬಂಧನದಂದು ಅಣ್ಣಂದಿರು ತಂಗಿಯರಿಗೆ ಉಡುಗೊರೆಯಾಗಿ ತಲ್ವಾರ್ ಕೊಡ್ಬೇಕು. ನಮ್ಮತ್ತ ಕಣ್ಣ ಎತ್ತಿ ನೋಡುವವರ ತಲೆಕಡಿದು ಭಾರತ ಮಾತೆಯ ಪಾದಕ್ಕೆ ಅರ್ಪಿಸುವಂತೆ ನಮ್ಮ ಸಹೋದರಿಯರಿಗೆ ಸೂಚಿಸಿ ಎಂದು ಸಾಧ್ವಿ ಸರಸ್ವತಿ ಹೇಳಿದರು.

ಗೋ ಹತ್ಯೆ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಷ್ಟೇ ಅಲ್ಲದೇ ಅವರ ಕತ್ತನ್ನು ಕತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

 

https://youtu.be/B1brRKodbtU

 

Comments

Leave a Reply

Your email address will not be published. Required fields are marked *