ಹಿಂದೂ, ಕ್ರೈಸ್ತರು ಜೊತೆಗೂಡಿ ಸಂಕ್ರಾಂತಿ ಆಚರಣೆ – ಪೊಂಗಲ್ ತಯಾರಿಸಿ ವಿಶೇಷ ಪೂಜೆ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹಿಂದೂ, ಕ್ರೈಸ್ತರು ಒಟ್ಟಿಗೆ ಸೇರಿ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ ಧಾರ್ಮಿಕ ಸಹಿಷ್ಣುತೆ ಮೆರೆದಿದ್ದಾರೆ.

ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆ ನಡೆಯಿತು. ವಿಶೇಷವಾಗಿ ಕ್ರೈಸ್ತ ಪಾದ್ರಿ ಸಗಯ್ ರಾಜುರವರಿಂದ ಸಂಕ್ರಾಂತಿ ಹಿನ್ನೆಲೆ ಪೂಜೆ, ಪ್ರಾರ್ಥನೆ ನಡೆಯಿತು.

ಯಾವುದೇ ಬೇಧವಿಲ್ಲದೆ ಹಿಂದೂ, ಕ್ರೈಸ್ತ ಭಾಂದವರು ಜೊತೆಯಾಗಿ ಪೊಂಗಲ್ ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮ ಸಡಗರದಿಂದ ಜೊತೆಗೂಡಿ ಸಂಕ್ರಾಂತಿ ಹಬ್ಬ ಆಚರಿಸಿದ್ದು ಬಹಳ ವಿಶೇಷವಾಗಿತ್ತು.

ಇತ್ತ ಮೈಸೂರಿನಲ್ಲಿ ವಿದೇಶಿಗರು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ ಎಲ್ಲರ ಮನಗೆದ್ದಿದ್ದಾರೆ. ಭಾರತೀಯ ಸಂಪ್ರದಾಯದಂತೆ ಗೋಪೂಜೆ ಮಾಡಿ ಗೋಮಾತೆಗೆ ನಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಗೋವುಗಳಿಗೆ ಪೂಜೆ ಮಾಡಿ ಫಲತಾಂಬುಲ ಕೂಡ ನೀಡಿದರು. ಜೊತೆಗೆ ಭತ್ತದ ರಾಶಿ, ನೇಗಿಲು, ಎತ್ತಿನ ಗಾಡಿ ಪರಿಕರಗಳಿಗೂ ಪೂಜೆ ಸಲ್ಲಿಸಿದರು.

Comments

Leave a Reply

Your email address will not be published. Required fields are marked *