21 ದಿನ ಐಸಿಯುನಲ್ಲಿದ್ದು ಸಾವು ಗೆದ್ದರೂ ಬೀದಿಗೆ ಬಿದ್ದ ಹಿಂದೂ ಕಾರ್ಯಕರ್ತ

ಮೈಸೂರು: ಮನೆ, ಸೈಟ್ ಮಾರಿಕೊಂಡು ವೈದ್ಯಕೀಯ ವೆಚ್ಚವನ್ನು ಭರಿಸಿಕೊಂಡು 21 ದಿನ ಐಸಿಯುನಲ್ಲಿದ್ದು ಸಾವು ಗೆದ್ದರೂ ಹಿಂದೂ ಕಾರ್ಯಕರ್ತರೊಬ್ಬರು ಬೀದಿಗೆ ಬಿದ್ದಿದ್ದಾರೆ.

2009ರಲ್ಲಿ ಹಿಂದೂ ಪರ ಸಂಘಟನೆಯ ಸಕ್ರಿಯ ಕಾರ್ಯಕರ್ತ ಗಿರಿಧರ್ ಮೇಲೆ ಕೆಎಫ್‍ಡಿ ಸಂಘಟನೆಯ 6 ಸದಸ್ಯರು ಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ಗಿರಿಧರ್ ಬಚಾವ್ ಆಗಿದ್ದರು. 21 ದಿನ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನು ಗೆದ್ದಿದ್ದರು. ಪ್ರಸ್ತುತ ಅವರು ಬಿಜೆಪಿ ಕಾರ್ಯಕರ್ತನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ಅಂದು ಅವರಿಗೆ ಬಿಜೆಪಿಯಿಂದ, ವಿವಿಧ ಹಿಂದೂ ಪರ ಸಂಘಟನೆಗಳಿಂದ ಭರಪೂರ ಭರವಸೆ ಸಿಕ್ಕಿತ್ತು. ಇದನ್ನೂ ಓದಿ: ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ

BRIBE

ಆದರೆ, ನಂತರ ಒಂದು ಭರವಸೆಯೂ ಈಡೇರಲಿಲ್ಲ. ನಯಾಪೈಸೆ ಹಣವೂ ಸಿಗಲಿಲ್ಲ. ವೈದ್ಯಕೀಯ ಚಿಕಿತ್ಸೆಗಾಗಿ 45 ಲಕ್ಷ ವೆಚ್ಚವಾಗಿತ್ತು. ಇದಕ್ಕಾಗಿ ಮನೆ, ಸೈಟ್ ಮಾರಿದ್ದರು. ಇದನ್ನೂ ಓದಿ: ಅಗ್ನಿ ಅವಘಡ – ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡ ತಾಯಿ, ಮಗಳು

Comments

Leave a Reply

Your email address will not be published. Required fields are marked *