ಭಾರೀ ಮಳೆಗೆ ನದಿಯಂತಾದ ರಸ್ತೆ- ಧರೆಗುರುಳಿದ ಮರ, ವಿದ್ಯುತ್ ಕಂಬಗಳು

ರಾಮನಗರ/ವಿಜಯಪುರ: ಕೆಲವು ದಿನಗಳಿಂದ ಪ್ರತಿದಿನ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಜನರ ಜೀವನ ಅಸ್ತವ್ಯಸ್ಥಗೊಂಡಿದೆ.

ರಾಮನಗರ ತಾಲೂಕಿನ ಹುಚ್ಚಮ್ಮನದೊಡ್ಡಿಯಲ್ಲಿ ಶುಕ್ರವಾರ ರಾತ್ರಿ ಗಾಳಿ ಸಹಿತ ಮಳೆಯಾಗಿದ್ದು, ಎಲ್ಲೆಡೆ ಮರಗಳು ಮತ್ತು ವಿದ್ಯುತ್ ಧರೆಗುರುಳಿವೆ. ಇತ್ತ ಗಾಳಿಗೆ ಮನೆ ಹಾಗೂ ದನದ ಕೊಟ್ಟಿಗೆ ಶೀಟುಗಳು ಹಾರಿ ಹೋಗಿವೆ. ಮಳೆಯಿಂದ ಸುಮಾರು 20 ಕ್ಕೂ ಹೆಚ್ಚು ತೆಂಗಿನ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಇನ್ನು ವಿಜಯಪುರ ಸಿಂದಗಿ ತಾಲೂಕಿನಲ್ಲಿ ನಸುಕಿನ ಜಾವದಲ್ಲೆ ಧಾರಾಕಾರ ಮಳೆ ಆರಂಭವಾಗಿದೆ. ಸತತ ಎರಡು ಗಂಟೆಗಳಿಂದ ಮಳೆ ಸುರಿಯುತ್ತಿದೆ. ಮಳೆಯಿಂದ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಹಳ್ಳದಂತೆ ನೀರು ಹರಿಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಪಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *