ವಿಜಯಪುರ: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಯುವಕ ಕೊಚ್ಚಿ ಹೋದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನೇಗಿನಾಳ-ಮುಳ್ಳಾಳ ಡೋಣಿ ಹಳ್ಳದಲ್ಲಿ ನಡೆದಿದೆ.

ಮಂಜುನಾಥ ಪಾಟೀಲ್ (23) ಹಳ್ಳದಲ್ಲಿ ಕೊಚ್ಚಿ ಹೋದ ಯುವಕ. ಬೈಕ್ ಮೇಲೆ ಹಳ್ಳ ದಾಟಲು ಮುಂದಾದಾಗ ಕೊಚ್ಚಿ ಹೋಗಿದ್ದಾನೆ. ರಾತ್ರಿ ಉಕ್ಕಿ ಹರಿಯುತ್ತಿದ್ದ ನೇಗಿನಾಳ-ಮುಳ್ಳಾಳ ಡೋಣಿ ಹಳ್ಳ ದಾಟಲು ಯುವಕರ ಯತ್ನಿಸಿದ್ದಾನೆ. ಇದನ್ನೂ ಓದಿ: ಆಲಮಟ್ಟಿ ಡ್ಯಾಂ 524 ಅಡಿಗೆ ಎತ್ತರಿಸಲು ಕ್ರಮ: ಸಿಎಂ ಬೊಮ್ಮಾಯಿ

ಹಳ್ಳದ ನೀರನ ರಭಸಕ್ಕೆ ಬೈಕ್ ಕೊಚ್ಚಿ ಹೋಗಿದೆ. ಬೈಕ್ ಮೇಲಿದ್ದ ಮಂಜುನಾಥ ಸಹ ನೀರು ಪಾಲಾಗಿದ್ದಾನೆ. ಮತ್ತೋರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಮನಗೂಳಿ ಪೊಲೀಸರು ಭೇಟಿ ನೀಡಿ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

Leave a Reply