ಕೊಡಗಿನಲ್ಲಿ ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ- ಜನಜೀವನ ಅಸ್ತವ್ಯಸ್ತ

ಮಡಿಕೇರಿ: ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು ಅಕ್ಷರಶಃ ಕೊಡಗಿನ ಮಂದಿ ನಲುಗಿದ್ದಾರೆ. ಮಳೆಯ ಅರ್ಭಟದೊಂದಿಗೆ ಭಾರೀ ಗಾಳಿ ಇಡೀ ಜಿಲ್ಲೆಯನ್ನು ನಡುಗಿಸಿದೆ.

10 ದಿನಗಳಿಂದ ಎಡೆಬಿಡದೆ ವರುಣ ತನ್ನ ಉಗ್ರನರ್ತನ ತೋರಿದ್ದು, ಮಳೆಯ ಅಬ್ಬರಕ್ಕೆ ವಿದ್ಯುತ್ ವ್ಯತ್ಯಯಗೊಂಡಿದೆ. ವಿದ್ಯುತ್ ಕಂಬಗಳು, ಮರಗಳು ಧರಶಾಯಿಗಳಾಗಿವೆ. ಮಡಿಕೇರಿ ನಗರದಲ್ಲಿ ಶನಿವಾರ ರಾತ್ರಿಯಿಂದಲ್ಲೇ ಪವರ್ ಕಟ್ ಆಗಿದ್ದು, ಹಲವು ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿದೆ. ಗಾಳಿ ಮಳೆಗೆ ಹಲವೆಡೆ ಅನಾಹುತಗಳು ಸಂಭವಿಸುತ್ತಿದ್ದು ಮನೆಗಳ ಶೀಟ್ ಗಳು, ಗೋಡೆಗಳು ಕುಸಿತಗೊಳ್ತಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಕ್ಷೇತ್ರ ಜಲಾವೃತಗೊಂಡಿದ್ದು ಸಂಚಾರ ಅಸ್ತವ್ಯಸ್ಥಗೊಂಡಿದೆ. ಮಹಾಮಳೆಗೆ ತ್ರಿವೇಣಿ ಸಂಗಮ ತುಂಬಿ ಜಲಾವೃತಗೊಂಡಿದ್ದು, ಇದ್ರಿಂದ ತಲಕಾವೇರಿಗೆ ತೆರಳಲು ಸಂಪರ್ಕ ಅಸಾಧ್ಯವಾಗಿದೆ.

ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿದೆ. ಕೊಡಗು ಜಿಲ್ಲೆ ಎಂದೆಂದೂ ಕಾಣದ ಮಹಾಮಳೆಗೆ ತತ್ತರಗೊಂಡಿದ್ದು ಮಳೆ ಸಾಕಪ್ಪ ಅಂತಾಗಿದೆ. ಇದನ್ನೂ ಓದಿ: ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ವಿರುದ್ಧ ಗುಡುಗಿದ ಬಾಲಕ – ಸಿಎಂ ಎಚ್‍ಡಿಕೆ ಪ್ರತಿಕ್ರಿಯೆ ಏನು ಗೊತ್ತಾ?

Comments

Leave a Reply

Your email address will not be published. Required fields are marked *