ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿತ: ಪ್ರವಾಸಿಗರ ಬಸ್ ಸ್ವಲ್ಪದರಲ್ಲೇ ಪಾರು

ಚಿಕ್ಕಮಗಳೂರು: ಭಾರೀ ಮಳೆಗೆ ಭಾನುವಾರ ಮುಳ್ಳಯ್ಯನ ಗಿರಿಯಲ್ಲಿ ಮಣ್ಣು ಕುಸಿದಿದ್ದು, ಕೇರಳ ಮೂಲದ ಮಿನಿ ಬಸ್ಸಿನ ಮುಂಭಾಗಕ್ಕೆ ಬಂಡೆ ತಾಗಿದೆ.

ಮುಳ್ಳಯ್ಯನ ಗಿರಿಯ ನಾಲ್ಕು ಭಾಗದಲ್ಲಿ ಮಣ್ಣು ಕುಸಿಯುತ್ತಿದ್ದು, ವಾರಾಂತ್ಯವಾಗಿದ್ದರಿಂದ ಸಾವಿರಕ್ಕೂ ವಾಹನಗಳು ಮುಳ್ಳಯ್ಯನಗಿರಿಗೆ ಆಗಮಿಸಿದ್ದವು. ಬಂಡೆ ಕುಸಿದ ಪರಿಣಾಮ ಸ್ವಲ್ಪದರಲ್ಲಿಯೇ ಭಾರೀ ಅನಾಹುತ ತಪ್ಪಿದೆ.

ಜಿಲ್ಲೆಯ ಪ್ರಮುಖ ನೈಸರ್ಗಿಕ ಪ್ರವಾಸಿತಾಣ ಆಗಿರುವ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲ ಪ್ರವಾಸಿ ಪ್ರಿಯರು ಸುರಿಯುವ ಮಳೆಯಲ್ಲಿಯೇ ಬೈಕಿನಲ್ಲೇ ಟ್ರಿಪ್ ಬರುತ್ತಿದ್ದಾರೆ.

ಮುಳ್ಳಯ್ಯನಗಿರಿಯಲ್ಲಿ ರಸ್ತೆ ಕಾಣದಷ್ಟು ದಟ್ಟ ಕಾನನದಂತೆ ಮಂಜು ಆವರಿಸಿಕೊಂಡಿದೆ. ಆದರೂ ಪ್ರವಾಸಿಗರು ತಮ್ಮ ವಾಹನಗಳನ್ನು ಸೀತಾಳಯ್ಯನಗಿರಿಯಲ್ಲಿ ನಿಲ್ಲಿಸಿ ತಣ್ಣನೆಯ ಗಾಳಿ, ಮಂಜಿನ ರಾಶಿ, ಸುರಿಯುವ ಮಳೆಯಲ್ಲಿ ನಡೆದುಕೊಂಡು ಬೆಟ್ಟದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಗಾಳಿಗೆ ಹಾರಿ ಹೋಗುತ್ತೇವೋ ಎಂಬ ಭಯದಿಂದ ಒಬ್ಬರಿಗೊಬ್ಬರು ಬಿಗಿಯಾಗಿ ಹಿಡಿದುಕೊಂಡು, ಬೆಟ್ಟ ಹತ್ತುತ್ತಾ, ಗಿರಿಯ ಸೌಂದರ್ಯ ಕಂಡು ಕುಣಿದು ಕುಪ್ಪಳಿಸುತ್ತಿದ್ದಾರೆ. ಗಿರಿಯ ರಸ್ತೆಗಳು ಹಾವು ಬಳುಕಿನ ಮೈಕಟ್ಟಿನ ರಸ್ತೆಯಂತಿದ್ದು, ಕೆಲ ತಿರುವುಗಳಲ್ಲಿ ಪ್ರವಾಸಿಗರು ಜಾರುವ ರಸ್ತೆಗಳಲ್ಲಿ ಸಾಹಸದಿಂದ ತಮ್ಮ ವಾಹನ ವಾಹನ, ಬೈಕ್ ಚಾಲನೆ ಮಾಡುತ್ತಿದ್ದಾರೆ. ಮಲೆನಾಡಿನ ಸೌಂದರ್ಯ ಕಂಡ ಹೊರಜಿಲ್ಲೆ ಪ್ರವಾಸಿಗರು ಕಾಫಿನಾಡಿನ ನಿತ್ಯಸುಮಂಗಲಿಯಂತ ಸೌಂದರ್ಯಕ್ಕೆ ಫುಲ್ ಫಿದಾ ಆಗಿದ್ದಾರೆ.

Comments

Leave a Reply

Your email address will not be published. Required fields are marked *