ಮೈಸೂರು: ರಾಜ್ಯದಲ್ಲಿ ಇಂದು ಕೂಡ ಮಳೆ ಮುಂದುವರೆದಿದೆ. ದನ ಮೇಯಿಸುವಾಗ ಸಿಡಿಲು ಬಡಿದು 6 ಮಂದಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ನಂದಿನಾಥಪುರದಲ್ಲಿ ನಡೆದಿದೆ.

ಪುಟ್ಟಣ್ಣ(60), ಸುವರ್ಣಮ್ಮ(45), ಸುದೀಪ್ ಹಾಗೂ ತಿಮ್ಮೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರಾದ ಸುಜಯ್(18) ಮತ್ತು ಉಮೇಶ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ದನ ಮೇಯಿಸುತ್ತಿದ್ದ ವೇಳೆ ಜೋರಾಗಿ ಮಳೆ ಸುರಿಯಲು ಆರಂಭಿಸಿತ್ತು. ಮಳೆ ಜೋರಾದ ಕಾರಣ ರಕ್ಷಣೆಗಾಗಿ ಗುಡಿಯ ಆಶ್ರಯ ಪಡೆದಿದ್ದವರಿಗೆ ಏಕಕಾಲಕ್ಕೆ ಸಿಡಿಲು ಬಡಿದಿದೆ.

ಮೃತರೆಲ್ಲರೂ ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.





Leave a Reply