ಮಳೆಗಾಲದಲ್ಲಿ ಪಾಲನೆ ಮಾಡಬೇಕಾದ ಆರೋಗ್ಯ ಸೂತ್ರಗಳು

ಹೊರಗೆ ಮಳೆ ಬರುತ್ತಿದೆ ಎಂದರೆ ಹಾಸಿಗೆ ಬಿಟ್ಟು ಏಳಲು ಮನಸ್ಸೇ ಆಗುವುದಿಲ್ಲ. ಬಿಸಿ ಬಿಸಿ ಬಜ್ಜಿ, ಬೋಂಡಾ, ಸಮೋಸ, ಪಾನಿಪುರಿ, ಗೋಬಿ, ಬಾಯಿ ಚಪ್ಪರಿಸುವ ತಿಂಡಿಗಳನ್ನು ತಿನ್ನಬೇಕೆನಿಸುತ್ತದೆ. ಹಾಗಾದ್ರೆ ಸ್ವಲ್ಪ ತಾಳಿ, ನೀವು ಮಳೆಗಾಲದಲ್ಲಿ ಮನಬಂದಂತೆ ಹೊರಗಿನ ತಿಂಡಿ, ಬೀದಿಬದಿಯ ತಿನಿಸುಗಳನ್ನು ತಿಂದರೆ ವೈದ್ಯರೇ ಬಳಿ ಹೋಗೋದು ಗ್ಯಾರೆಂಟಿ.

ಜ್ವರ, ಶೀತ, ನೆಗಡಿ ಹೀಗೆ ಅನೇಕ ರೋಗಗಳು ನಿಮ್ಮನ್ನು ಆವರಿಸಬಹುದು. ಮಳೆಗಾಲದಲ್ಲಿ ನೀರಿನಲ್ಲಿ ಸೂಕ್ಷ್ಮಾಣುಗಳು ಉತ್ಪತ್ತಿ ಆಗುತ್ತದೆ. ನೀರಿನ ಮೂಲಕ ರೋಗಾಣುಗಳು ನಿಮ್ಮನ್ನು ಅಟ್ಯಾಕ್ ಮಾಡಲು ಹೊಂಚು ಹಾಕುತ್ತಿರುತ್ತದೆ. ಆದ್ದರಿಂದ ಈ ಕಾಲದಲ್ಲಿ ನೀವು ಎಚ್ಚರಿಕೆಯಿಂದಿರಬೇಕು. ಅದರಲ್ಲೂ ನೀರಿನ ವಿಚಾರದಲ್ಲಿ ಸ್ವಲ್ಪ ಕಾಳಜಿ ಹೆಚ್ಚಿದರೆ ಒಳ್ಳೆಯದು.

ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ಟಿಪ್ಸ್ ಗಳು ಹೀಗಿವೆ

* ಈ ಕಾಲದಲ್ಲಿ ರೋಗಗಳು ಹೆಚ್ಚಾಗಿ ನೀರಿನಿಂದ ಹರಡುತ್ತದೆ. ಹೀಗಾಗಿ ನೀರನ್ನು ಕುದಿಸಿ, ಆರಿಸಿ ಕುಡಿಯಿರಿ.
* ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಹೀಗಾಗಿ ಕಷಾಯ, ಹರ್ಬಲ್ ಟೀ ಸೇವಿಸಿ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ.
* ರಸ್ತೆ ಬದಿಯ ತಿಂಡಿ ತಿನಿಸುಗಳಿಂದ ಸಾಧ್ಯವಾದಷ್ಟು ದೂರವಿರಿ.
* ಬಿಸಿಯಾದ ಆಹಾರ ಸೇವಿಸಿ, ಹಸಿರು ಸೊಪ್ಪು, ತಾಜಾ ತರಕಾರಿಗಳ ಸೇವನೆ ಆರೋಗ್ಯಕರ.

* ತರಕಾರಿಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅಡುಗೆ ಮಾಡಲು ಬಳಸಿ.
* ಬೆಳಗ್ಗೆ ಮನೆಯಿಂದ ಹೊರಡುವಾಗ ಸ್ನಾನ ಮಾಡಿದ್ದರೂ, ಮತ್ತೊಮ್ಮೆ ಸಂಜೆ ಸ್ನಾನ ಮಾಡಿ. ಇದ್ರಿಂದ ಬೆವರಿನಿಂದ ಬರಬಹುದಾದ ಸೋಂಕಿನಿಂದ ರಕ್ಷಣೆ ಸಿಗುತ್ತದೆ.
* ಚಳಿ ಇರುವಾಗ ಹೆಚ್ಚು ಬಾಯಾರಿಕೆ ಆಗುವುದಿಲ್ಲ. ಆದರೂ ನೀವು ನೀರು ಕುಡಿಯುವುದನ್ನು ಕಡಿಮೆ ಮಾಡಲೇಬೇಡಿ.
* ಮಳೆಯಲ್ಲಿ ಹೆಚ್ಚಾಗಿ ಹೊರಗೆ ಹೋಗಬೇಡಿ, ಇದ್ರಿಂದ ವೈರಲ್ ರೋಗಗಳು ಬರುವ ಸಾಧ್ಯತೆ ಹೆಚ್ಚು.

* ಮನೆಯಲ್ಲಿ ತೇವ ಅಥವಾ ಒದ್ದೆ ಇರುವ ಗೋಡೆಗಳಿದ್ದರೆ ಶಿಲೀಂದ್ರಗಳ ಅವಾಸಸ್ಥಾನವಾಗುತ್ತೆ. ಉಸಿರಾಟ ಸಮಸ್ಯೆ ಇರುವವರು ಎಚ್ಚರದಿಂದಿರಿ.
* ಪದೇ ಪದೇ ಕೊಳೆ ಇರುವ, ತೊಳೆಯದ ಕೈಗಳಿಂದ ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ. ವೈರಸ್ ಹರಡಬಹುದು.
* ಮನೆಯಲ್ಲಿ ಮಕ್ಕಳಿದ್ದರೆ ಅವರು ತಿನ್ನುವ ಆಹಾರ, ಕುಡಿಯುವ ನೀರಿನ ಬಗ್ಗೆ ಗಮನ ವಹಿಸಿ.
* ಮಕ್ಕಳನ್ನು ನೀರಿನಲ್ಲಿ ಆಡಲು & ಮಳೆಯಲ್ಲಿ ನೆನೆಯಲು ಬಿಡಬೇಡಿ.. ಬಟ್ಟೆ ಒದ್ದೆಯಾಗಿರದಂತೆ ನೋಡಿಕೊಳ್ಳಿ.
* ನಿಮ್ಮ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡಿದ್ದರೆ ರೋಗ ಕಟ್ಟಿಟ್ಟಬುತ್ತಿ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದ್ರಿಂದ ಸೊಳ್ಳೆ, ನೊಣಗಳು ದಾಳಿ ತಪ್ಪುತ್ತದೆ.

Comments

Leave a Reply

Your email address will not be published. Required fields are marked *