ಮದ್ಯಕ್ಕಾಗಿ ಮಧ್ಯಾಹ್ನದ ಬಿಸಿಯೂಟದ ಅಕ್ಕಿಯನ್ನೇ ಮಾರಲು ಹೋದ ಮುಖ್ಯಶಿಕ್ಷಕ..!

ಮೈಸೂರು: ಇಲ್ಲಿನ ಶಾಲೆಯ ಮುಖ್ಯ ಶಿಕ್ಷಕನೊಬ್ಬ ಮದ್ಯಕ್ಕಾಗಿ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಅಕ್ಕಿಯನ್ನೇ ಮಾರಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಜಶೆಟ್ಟಿ ಎಂಬಾತನೇ ಅಕ್ಕಿ ಮಾರಾಟ ಮಾಡಲು ಯತ್ನಿಸಿದ್ದು, ಈತ ಹೆಚ್.ಡಿ.ಕೋಟೆ ತಾಲೂಕಿನ ರಾಜೇಗೌಡನಹುಂಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಸದ್ಯ ಈತನನ್ನು ಗ್ರಾಮಸ್ಥರು ಅಕ್ಕಿಮೂಟೆ ಸಮೇತ ಹಿಡಿದಿದ್ದಾರೆ.

ಶಿಕ್ಷಕ ಸಿಕ್ಕಿಬಿದ್ದಿದ್ದು ಹೇಗೆ?: ಶಾಲೆ ಸಮಯ ಮುಗಿದ ಮೇಲೆ ಮುಖ್ಯಶಿಕ್ಷಕ ಶಾಲೆಗೆ ಭೇಟಿ ನೀಡಿದ್ದಾನೆ. ಅಲ್ಲದೇ ಶಾಲೆಯಲ್ಲಿ ಅಕ್ಕಿಯಿದ್ದ ಕೊಠಡಿಯ ಬೀಗ ತೆಗೆದು ಅಲ್ಲಿಂದ ಸುಮಾರು 1 ಕ್ವಿಂಟಾಲ್ ಅಕ್ಕಿ ಮೂಟೆಯನ್ನು ಮಾರಾಟ ಮಾಡಲು ಯತ್ನಿದ್ದನು. ಈ ವೇಳೆ ಗ್ರಾಮಸ್ಥರು ಅಕ್ಕಿ ಸಮೇತ ಮುಖ್ಯಶಿಕ್ಷಕನನ್ನು ಹಿಡಿದಿದ್ದಾರೆ. ಈ ವೇಳೆ ಅಕ್ಕಿ ಖಾಲಿಯಾಗಿದ್ದ ಸಂದರ್ಭದಲ್ಲಿ ಸಾಲ ಮಾಡಿದ್ದೆ. ಹೀಗಾಗಿ ಆ ಅಕ್ಕಿಯನ್ನು ಇದೀಗ ವಾಪಸ್ ನೀಡಲು ಮುಂದಾಗಿದ್ದೇನೆ ಎಂದು ರಾಜೇಶ್ ಶೆಟ್ಟಿ ಸಬೂಬು ಹೇಳಿದ್ದನು.

ಸದ್ಯ ಗ್ರಾಮಸ್ಥರು ಈ ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಿಇಓ ಸುಂದರ್ ಮಾಹಿತಿ ಕಲೆ ಹಾಕಿದ್ದಾರೆ. ಗ್ರಾಮಸ್ಥರ ಆರೋಪದ ಮೇಲೆ ಮುಖ್ಯಶಿಕ್ಷಕ ರಾಜಶೆಟ್ಟಿಗೆ ನೋಟಿಸ್ ನೀಡಿದ್ದಾರೆ. ಅಲ್ಲದೇ ರಾಜಶೆಟ್ಟಿ ಮೇಲೆ ಇಲಾಖಾ ತನಿಖೆಗೂ ಬಿಇಓ ಸುಂದರ್ ಆದೇಶ ನೀಡಿದ್ದಾರೆ. ಮುಖ್ಯಶಿಕ್ಷಕನ ಮದ್ಯವ್ಯಸನದ ಬಗ್ಗೆಯೂ ಗ್ರಾಮಸ್ಥರು ಬಿಇಓಗೆ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *