ಆಲೂಗೆಡ್ಡೆ ಹೊರುವುದಕ್ಕೂ ರೆಡಿ, ಬೆಡ್ ಶೀಟ್ ಹೊದ್ಕಂಡ್ ಮಲಗೋಕೂ ರೆಡಿ: ಹೆಚ್.ಡಿ.ರೇವಣ್ಣ

– ನಾನು ಜೀವನದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ

ಹಾಸನ: ನಾನು ಜೀವನದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ. ಹಾಗೇನಾದ್ರು ಮಾಡಿದ್ರೆ ಆ ತಾಯಿಯೇ ಶಿಕ್ಷೆ ನೀಡಲಿ ಎಂದು ಶಾಸಕ ಹೆಚ್‍ಡಿ.ರೇವಣ್ಣ ಹೇಳಿದ್ದಾರೆ.

ಹಾಸನಾಂಬೆ ದೇವಿ ಹುಂಡಿಯಲ್ಲಿ ಭಕ್ತರ ನಾನಾ ಬಗೆಯ ಬೇಡಿಕೆ ಪತ್ರಗಳು ಗಮನ ಸೆಳೆದವು. ಇದರಲ್ಲಿ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರನ್ನ ಹೊಳೆನರಸೀಪುರ ಶಾಸಕ ಸ್ಥಾನದಿಂದ ಬದಲಿಸಿ, ಭೂಗಳ್ಳರಿಂದ ನನ್ನ ಭೂಮಿ ವಾಪಸ್ ಕೊಡಿಸು, ಮಗಳಿಗೆ ಮದುವೆ ಮಾಡಿಸು, ಸರ್ಕಾರಿ ಕೆಲಸ ಕೊಡಿಸು ಹೀಗೆ ವಿಭಿನ್ನ ಪತ್ರಗಳು ಹಾಸನಾಂಬೆ ಹುಂಡಿಯಲ್ಲಿ ಸಿಕ್ಕಿ ಗಮನ ಸೆಳೆದವು. ಇದನ್ನೂ ಓದಿ:  ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ

ತಮ್ಮ ಬಗ್ಗೆ ಪತ್ರ ಸಿಕ್ಕಿದ್ದ ಬಗ್ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಜೀವನದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ. ಹಾಗೇನಾದರು ಮಾಡಿದ್ದರೆ ಆ ತಾಯಿಯೇ ಶಿಕ್ಷೆ ನೀಡಲಿ. ಯಾರಾದರೂ ಕಿಡಿಗೇಡಿಗಳು ಇರ್ತಾರಲ್ಲ ಅವರು ಇದನ್ನ ಮಾಡಿಸುತ್ತಾರೆ. ನಾವು ಮಂದೆ ಎರಡು ರಾಷ್ಟ್ರೀಯ ಪಕ್ಷಗಳನ್ನ ತೆಗೆಯೋವರೆಗೂ ಕೊರೊನಾ ಹೋಗಲ್ಲ ಅಂತ ಬರೆಸಿ ಹಾಕ್ಬೇಕಾಗುತ್ತೆ. ಹಾಗೇನಾದರು ಇದ್ದರೆ ದೇವಿ ತೆಗೆಯಲಿ ಆಕೆ ನೋಡಿ ಕೊಳ್ಳಲಿ. ನಮಗೇನು ನಾವು ಆಲೂಗೆಡ್ಡೆ ಹೊರವುದಕ್ಕೂ ರೆಡಿ, ಬೆಡ್ ಶೀಟ್ ಹೊದ್ಕಂಡ್ ಮಲಗೋಕೂ ರೆಡಿ ಎಂದಿದ್ದಾರೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡ್ತಿದ್ದಾರೆ – ಹಾಸನಾಂಬೆಗೆ ಪತ್ರ

Comments

Leave a Reply

Your email address will not be published. Required fields are marked *