ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ತಾಯಿ-ಮಗುವಿನ ಆರೈಕೆಗೆ ಇಷ್ಟು ಹಣ- ಹೆಚ್‍ಡಿಕೆಯಿಂದ ಬಂಪರ್ ಆಫರ್

ರಾಯಚೂರು: ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ತಾಯಿ ಮಗುವಿನ ಆರೈಕೆಗೆ ಪ್ರತಿ ತಿಂಗಳು ಆರು ಸಾವಿರದಂತೆ ಆರು ತಿಂಗಳಿಗೆ 36 ಸಾವಿರ ರೂಪಾಯಿ ನೀಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಯಚೂರಿನ ದೇವದುರ್ಗದ ಅರಕೇರಾದಲ್ಲಿ ಬಿಜೆಪಿ ಜಿ.ಪಂ ಸದಸ್ಯ ವೆಂಕಟೇಶ್ ಪೂಜಾರಿ ಕುಟುಂಬದಿಂದ ಏರ್ಪಡಿಸಿದ್ದ 125 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸುಳ್ಳು, ಸಿಎಂ ಕಚೇರಿಯಿಂದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್, ಬಿಜೆಪಿ ಜೊತೆ ಮೈತ್ರಿ ಸಾಧ್ಯವೇ ಇಲ್ಲ. ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಅಂದ್ರು.

ಬರಗಾಲ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣ ಸೋತಿದೆ. ಅವೈಜ್ಞಾನಿಕ ಮಾರ್ಗದರ್ಶಿ ಸೂಚನೆಗಳಿಂದ ಸರ್ಕಾರ ಹಗಲುದರೋಡೆ ನಡೆಸಿದೆ. ಕೃಷ್ಣ ಬಿ ಸ್ಕೀಮ್ ನ 170 ಟಿಎಂಸಿ ನೀರು ಸದ್ಬಳಕೆಯಾಗುತ್ತಿಲ್ಲ. ಕೃಷ್ಣಾ ಕಣಿವೆ ಯೋಜನೆಯ 40 ಸಾವಿರ ಕೋಟಿ ರೂಪಾಯಿ ಗುಣಾತ್ಮಕವಾಗಿ ಬಳಕೆಯಾಗದೇ ಹಣ ಪೋಲಾಗಿದೆ ಅಂತ ಹೆಚ್‍ಡಿಕೆ ಆರೋಪಿಸಿದ್ರು.

 

Comments

Leave a Reply

Your email address will not be published. Required fields are marked *