ಸಿದ್ದರಾಮಯ್ಯಗೆ ಮಾಡಲು ಬೇರೆ ಕೆಲಸವಿಲ್ಲ: ಬಿಸಿ ಪಾಟೀಲ್

ಹಾವೇರಿ: ಸಿದ್ದರಾಮಯ್ಯಗೆ ಮಾಡಲು ಬೇರೆ ಕೆಲಸವಿಲ್ಲ. ವಾಗ್ದಾಳಿ ಮಾಡೋದು ಅವರ ಮೂಲಭೂತ ಹಕ್ಕು ಎಂದು ತಿಳ್ಕೊಂಡಿದ್ದಾರೆ. ಚುನಾವಣೆಯಲ್ಲಿ ಜನರು ಉತ್ತರ ಕೊಡುತ್ತಾರೆ ಎಂದು ಬಿ.ಸಿ.ಪಾಟೀಲ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಲಿಂಗದೇವರಕೊಪ್ಪ ಕ್ರಾಸ್ ನಲ್ಲಿ ಮಾತನಾಡಿದ ಅವರು, ಇವತ್ತು ನನ್ನ ಜನ್ಮದಿನ. ಕಾಕತಾಳೀಯ ಎಂಬಂತೆ ನಾನು ಹೊಸದಾಗಿ ಪಕ್ಷ ಸೇರಿದ್ದೇನೆ. ಹಿರೇಕೆರೂರು ಕ್ಷೇತ್ರದಲ್ಲಿ ಗೆಲುವು ಸಾಧಿಸೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ ಸಹ ನನ್ನೊಂದಿಗೆ ಇದ್ದಾರೆ. ನನಗೆ ಆನೆ ಬಲಬಂದಂತೆ ಆಗಿದೆ. ಅವರು ಮತ ನನ್ನ ಮತಗಳು ಸೇರಿದರೆ ರಾಜ್ಯದಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ. ಅಲ್ಲದೆ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿ, ರಸ್ತೆಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದರು.

Comments

Leave a Reply

Your email address will not be published. Required fields are marked *