ಹಾವೇರಿಯಲ್ಲಿ ದಂಪತಿ ಮರ್ಡರ್ ಕೇಸ್ – ಬುರ್ಖಾ ಧರಿಸಿ ಎಸ್ಕೇಪ್ ಆಗಿದ್ದ ಆರೋಪಿ ಬಂಧನ

ಹಾವೇರಿ: ಬೆಳ್ಳಂಬೆಳಗ್ಗೆ ದಂಪತಿಯನ್ನು ಬರ್ಬರ ಹತ್ಯೆ ಮಾಡಿ ಬುರ್ಖಾ ಧರಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

ಕೋಟೆಪ್ಪ ಬಂಧಿತ ಆರೋಪಿಯಾಗಿದ್ದು, ಹತ್ಯೆ ನಡೆದ ವೇಳೆ ಆರೋಪಿ ಹೆಲ್ಮೆಟ್ ಹಾಗೂ ಬುರ್ಖಾ ಧರಿಸಿ ಬಂದಿದ್ದ ಎನ್ನುವ ಮಾಹಿತಿಯನ್ನು ಗ್ರಾಮಸ್ಥರಿಂದ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪೊಲೀಸ್ ತನಿಖೆ ವೇಳೆ ಕೊಲೆಯಾದ ವ್ಯಕ್ತಿ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸುಳಿವು ಸಿಕ್ಕಿತ್ತು. ಬಳಿಕ ಆರೋಪಿಗಾಗಿ ಬಲೆ ಬೀಸಿದ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಕೋಟೆಪ್ಪನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಇಂದು ಬೆಳಗ್ಗೆ ಜಿಲ್ಲೆ ಸವಣೂರು ತಾಲೂಕು ಹತ್ತಿಮತ್ತೂರು ಗ್ರಾಮದ ಮನೆಯಲ್ಲಿದ್ದ ಮಾರ್ತಾಂಡಪ್ಪ ಬಾರ್ಕಿ ಮತ್ತು ಸುಧಾ ಬಾರ್ಕಿ ಎಂಬ ದಂಪತಿ ಹತ್ಯೆಯಾಗಿತ್ತು. ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಕೋಟೆಪ್ಪ ಕೊಲೆ ಮಾಡಿ ಪರಾರಿಯಾಗಿದ್ದ.

ಕೊಲೆಗೆ ಕಾರಣವೇನು: ಸದ್ಯ ಪೊಲೀಸರು ಬಂಧಿಸಿರುವ ಆರೋಪಿ ಕೋಟೆಪ್ಪನ ಪತ್ನಿಯೊಂದಿಗೆ ಮಾರ್ತಾಡಂಪ್ಪ ಅಕ್ರಮ ಸಂಬಂಧ ಹೊಂದಿದ್ದ. ಇದ್ದರಿಂದ ರೋಚ್ಚಿಗೆದ್ದ ಆರೋಪಿ ಕೋಟೆಪ್ಪ ಬುರ್ಖಾ ಧರಿಸಿಕೊಂಡು ಹೋಗಿ ಮಾರ್ತಾಂಡಪ್ಪನನ್ನು ಹತ್ಯೆ ಮಾಡಿದ್ದ. ಅಲ್ಲದೇ ಪತಿಯನ್ನ ಬಿಡಿಸಿಕೊಳ್ಳಲು ಹೋದ ಮಾರ್ತಾಂಡಪ್ಪನ ಪತ್ನಿ ಸುಧಾರನ್ನು ಕೊಲೆ ಮಾಡಿದ್ದಾಗಿ ಕೋಟೆಪ್ಪ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *