ಗೆದ್ರೆ ಖುಷಿಯಲ್ಲಿ, ಸೋತ್ರೆ ದು:ಖದಲ್ಲಿ ತಿನ್ನೋಣವೆಂದು 2 ಕೆಜಿ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ- ಅಮೀನ್ ಮಟ್ಟು

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರೋ ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‍ಮಟ್ಟು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದಾರೆ.

ಗೆದ್ದರೆ ಗೆದ್ದ ಖುಷಿಯಲ್ಲಿ, ಸೋತರೆ ಸೋತ ದು:ಖದಲ್ಲಿ ತಿನ್ನುವ ಎಂದು ಎರಡು ಕಿಲೋ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ. ಮೀನು ತಿಂದು ಬಿಸಾಡಿದ ಮುಳ್ಳುಗಳಿಗೆ ಕಾಯುತ್ತಿರುವವರನ್ನು ಯಾಕೆ ನಿರಾಶೆ ಪಡಿಸಬೇಕಲ್ವಾ? ಸೋತು ಗೆದ್ದರೆ ಸ್ವಲ್ಪ ಖುಷಿ, ಸ್ವಲ್ಪ ದು:ಖಕ್ಕೆ ಇರಲಿ ಎಂದು ಮಡಿಕೇರಿ ಗೆಳೆಯರು ಕೊಟ್ಟಿರುವ ಸಿಹಿ- ಒಗರಿನ ಅಡಿಕೆ ವೈನ್ ಕೂಡಾ ಇಟ್ಟುಕೊಂಡಿದ್ದೇನೆ ಎಂದು ಅಮೀನ್ ಮಟ್ಟು ಪೋಸ್ಟ್ ಮಾಡಿದ್ದಾರೆ.

ಭಾರೀ ಕುತೂಹಲ ಮೂಡಿಸುತ್ತಿರುವ ಗುಜರಾತ್ ಚುನಾವಣೆಯ ಫಲಿತಾಂಶಗಳು ನಿಮಿಷ ನಿಮಿಷಗಳಲ್ಲಿ ಬದಲಾಗುತ್ತಿದೆ. ಆರಂಭದ ಮತ ಎಣಿಕೆಯ ವೇಳೆ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೆ ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶ ತಿಳಿದುಬರಲಿದೆ.

 

Comments

Leave a Reply

Your email address will not be published. Required fields are marked *