ದೆಹಲಿಗೆ ಹಾಸನದಿಂದಲೂ 16 ಜನ ಹೋಗಿದ್ದು, 6 ಜನ ವಾಪಸ್ ಆಗಿದ್ದಾರೆ: ಡಿಸಿ

ಹಾಸನ: ಕೊರೊನಾ ಸೋಂಕಿನ ಹಾಟ್‍ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ದೆಹಲಿ ಧಾರ್ಮಿಕ ಸಭೆಗೆ ಹಾಸನದಿಂದ 16 ಜನ ಹೋಗಿದ್ದು, ಅವರಲ್ಲಿ 6 ಜನ ಮರಳಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.

ವಾಪಸ್ ಬಂದ ಎಲ್ಲರನ್ನೂ ನಾವು ಗುರುತಿಸಿದ್ದೇವೆ. ಉಳಿದವರು ದೆಹಲಿ, ವಾರಂಗಲ್, ಕುಂದಾಪುರ, ಜಮ್ಮು ಕಾಶ್ಮೀರದಲ್ಲಿ ಇರುವ ಮಾಹಿತಿ ಲಭ್ಯವಾಗಿದೆ. ಹಾಸನ ಜಿಲ್ಲೆಯಲ್ಲಿ ಇರುವವರನ್ನು ಪ್ರತ್ಯೇಕಿಸಿ ನಿಗಾವಹಿಸಲಾಗುತ್ತಿದೆ. ಯಾರಿಗೂ ಈವರೆಗೆ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಇರುವ ಆರು ಮಂದಿಯಲ್ಲಿ ಒಬ್ಬರು ಕೊಡಗಿನವರಾಗಿದ್ದು, ಅವರೂ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ದೆಹಲಿಗೆ ಹೋಗಿ ಬಂದವರ ಬಗ್ಗೆ ಜಿಲ್ಲೆಯ ಜನರಿಗೆ ತಿಳಿದಿದ್ದರೆ ಅವರ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ನೇರವಾಗಿ ಬಂದು ತಿಳಿಸಬಹುದು ಅಥವಾ ಹೆಲ್ಪ್‍ಲೈನ್ ಮುಖಾಂತರ ಮಾಹಿತಿ ನಿಡಬಹುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇದುವರೆಗೂ ಯಾರಿಗೂ ಕೊರೊನ ಪಾಸಿಟಿವ್ ಕಂಡುಬಂದಿಲ್ಲ, ಜಿಲ್ಲೆಯ ಜನ ಧೈರ್ಯವಾಗಿರುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *