ಸಂತ್ರಸ್ತರಿಗೆ ವಿಕಲ ಚೇತನ ವ್ಯಕ್ತಿಯಿಂದ ಆಹಾರ ಸಂಗ್ರಹ

ಚಿಕ್ಕೋಡಿ: ಕೊಡಗು ಸಂತ್ರಸ್ತರಿಗೆ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನತೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೇ ಸಂತ್ರಸ್ತರಿಗೆ ವಿಕಲ ಚೇತನ ವ್ಯಕ್ತಿಯೊಬ್ಬರು ಆಹಾರವನ್ನು ಸಂಗ್ರಹಿಸಿದ್ದಾರೆ.

ವಿಶೇಷ ಅಂದರೆ ಬಿಸ್ಕಟ್, ಬ್ರೆಡ್ ಸೇರಿದಂತೆ ಆಹಾರ ಪದಾರ್ಥವನ್ನು ವಿಕಲ ಚೇತನ ವ್ಯಕ್ತಿಯೊಬ್ಬರು ಜನರಿಂದ ಸಂಗ್ರಹಿಸಿ ಅಥಣಿ ತಹಶಿಲ್ದಾರರ ಮೂಲಕ ಕೊಡಗು ಮತ್ತು ಮಡಿಕೇರಿಯ ಪ್ರವಾಹ ಸಂತ್ರಸ್ತರಿಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಥಣಿ ತಾಲೂಕಿನ ಐನಾಪೂರದ ನಿವಾಸಿ ರಮೇಶ್ ನಾಯಕ ವಿಕಲ ಚೇತನ ಸದ್ಯ ಮಾನವೀಯತೆ ಮೆರೆದಿದ್ದು, ನಾಲ್ಕು ಬಾಕ್ಸ್‍ನಷ್ಟು ಆಹಾರ ಪದಾರ್ಥಗಳನ್ನು ತಹಶಿಲ್ದಾರ ಕಚೇರಿ ಮೂಲಕ ತಲುಪಿಸಲು ಮುಂದಾಗಿದ್ದು ಸಹಾಯದ ಹಸ್ತ ಚಾಚಿದ್ದಾರೆ.

ಸದ್ಯ ರಮೇಶ್ ನಾಯಕ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಕೊಡುಗು ಸಂತ್ರಸ್ಥರಿಗೆ ತಲುಪಿಸಲಾಗುವುದು ಎಂದು ಅಥಣಿ ತಹಶಿಲ್ದಾರ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *