ನೋವಿನಲ್ಲೂ ಪತಿಗೆ ಸೆಲ್ಯೂಟ್ ಮಾಡಿ ಭಾರತ್ ಮಾತಾಕೀ ಜೈ ಎಂದ ಗುರು ಪತ್ನಿ

ಮಂಡ್ಯ: ಗುರು ಅಮರ್ ರಹೇ.. ಗುರು ಅಮರ್ ರಹೇ ಎಂಬ ಘೋಷಣೆಗಳೊಂದಿಗೆ ಯೋಧನ ಅಂತಿಮ ವಿಧಿ ವಿಧಾನ ನಡೆಸಲು ಸಿದ್ಧತೆ ಆರಂಭವಾಗುತ್ತಿದಂತೆ ಗುರು ಅವರ ಪತ್ನಿ ಕಲಾವತಿ ಅವರಿಗೆ ಅಂತಿಮ ವಂದನೆ ಸಲ್ಲಿಸಲು ಅವಕಾಶ ನೀಡಲಾಯಿತು. ಈ ವೇಳೆ ಪತಿಯ ಚಿತೆಯ ಮುಂದೆ ನಿಂತ ಅವರು ಸೆಲ್ಯೂಟ್ ಮಾಡಿ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದರು.

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮಡಿದ ಮಂಡ್ಯ ವೀರ ಯೋಧಯೋಧ ಎಚ್ ಗುರು ಪಂಚಭೂತಗಳಲ್ಲಿ ಲೀನಾರಾಗಿದ್ದಾರೆ. ಯೋಧನ ಅಂತಿಮ ದರ್ಶನ ಪಡೆಯಲು ನೆರೆದಿದ್ದ ಜನಸಾಗರ ನಡುವೆ ಸೆಲ್ಯೂಟ್ ಮಾಡಿ ಪತ್ನಿ ದೇಶ ಪ್ರೇಮ ಮೆರೆದಾಗ ಅಲ್ಲಿದ್ದ ಜನರ ಕಣ್ಣಲ್ಲಿ ನೀರು ಜಿನುಗಿತು.

ಸರ್ಕಾರದ ಸಕಲ ಗೌರವ ವಂದನೆ ಸಲ್ಲಿಸಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ಗುರು ಪಾರ್ಥಿವ ಶರೀರದ ಮೇಲೆದಿದ್ದ ತ್ರಿವರ್ಣ ಧ್ವಜವನ್ನು ಪತ್ನಿಗೆ ಹಸ್ತಾಂತರಿಸಿದರು. ಇದೇ ವೇಳೆ ಸರ್ಕಾರದಿಂದ ಘೋಷಣೆ ಮಾಡಿದ್ದ 25 ಲಕ್ಷ ರೂ. ಚೆಕನ್ನು ನೀಡಿ ಸಾಂತ್ವನ ಹೇಳಿದರು.

ಗುರು ಸಹೋದರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದಾಗ ನೆರೆದಿದ್ದ ಜನಸಾಗರ ಭೋಲೋ ಭಾರತ್ ಮಾತಾಕೀ ಜೈ, ವೀರ ಯೋಧ ಗುರುಗೆ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿ ಅಂತಿಮ ನಮನ ಸಲ್ಲಿಸಿದರು. ನೆರೆದಿದ್ದ ಜನರಲ್ಲಿ ದೇಶ ಪ್ರೇಮ ಉಕ್ಕಿ ಹರಿದಿತ್ತು. ಇದೇ ವೇಳೆ ಜನ ಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇದಕ್ಕೂ ಮುನ್ನ ಬೆಂಗಳೂರಿನಿಂದ ಯೋಧರ ಹುಟ್ಟೂರಿನ ವರೆಗೂ ಕೂಡ ಸಾವಿರಾರರು ಜನರು ರಸ್ತೆಯಲ್ಲಿ ನಿಂತು ದರ್ಶನ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *